​‘ಮಂಗಳೂರು ದಸರಾದ ಶೋಭಾಯಾತ್ರೆ; ಪಾರ್ಕಿಂಗ್ ವ್ಯವಸ್ಥೆ’

Update: 2018-10-17 15:13 GMT

ಮಂಗಳೂರು, ಅ.17: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾದ ಅಂಗವಾಗಿ ಅ.19ರಂದು ನಡೆಯುವ ಶೋಭಾಯಾತ್ರೆಗೆ ಆಗಮಿಸುವ ಭಕ್ತರ ಅನುಕೂಲತೆ ದೃಷ್ಟಿಯಿಂದ ನಗರದ ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.

5 ಕಡೆಗಳಲ್ಲಿ ಪಾರ್ಕಿಂಗ್: ಮೂಡುಬಿದಿರೆ, ವಾಮಂಜೂರು, ಕುಲಶೇಖರ, ನಂತೂರು ಮಾರ್ಗವಾಗಿ ಆಗಮಿಸುವ ವಾಹನಗಳಿಗೆ ರಾಮಕೃಷ್ಣ ಕಾಲೇಜು ಮೈದಾನ, ಕಾಸರಗೋಡು, ತೊಕ್ಕೊಟ್ಟು, ಉಳ್ಳಾಲ ಮಾರ್ಗವಾಗಿ ಬರುವ ವಾಹನಗಳಿಗೆ ಪುರಭವನ ಬಳಿಯ ಫುಟ್‌ಬಾಲ್ ಮೈದಾನ, ಸುಲ್ತಾನ್ ಬತ್ತೇರಿ, ಉರ್ವ, ಅಶೋಕನಗರ ಕಡೆಯಿಂದ ಬರುವ ವಾಹನಗಳಿಗೆ ಉರ್ವ ಮಾರ್ಕೆಟ್ ಮೈದಾನ, ಸುರತ್ಕಲ್, ಕೂಳೂರು, ಕೋಡಿಕಲ್ ಕಡೆಯಿಂದ ಆಗಮಿಸುವ ವಾಹನಗಳಿಗೆ ಉರ್ವಸ್ಟೋರ್ ಮೈದಾನ ಹಾಗೂ ಪೊಂಪೈ ಸ್ಕೂಲ್ ಮೈದಾನ, ಬಜಪೆ, ಕಾವೂರು, ಯೆಯ್ಯೋಡಿ, ಲಾಲಾಭಾಗ್, ಲೇಡಿಹಿಲ್, ಕೆಎಸ್‌ಆರ್‌ಟಿಸಿ ಕಡೆಯಿಂದ ಆಗಮಿಸುವ ವಾಹನಗಳಿಗೆ ಶಾರದಾ ಉತ್ಸವ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದೆಂದು ಕುದ್ರೋಳಿ ದೇವಳದ ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News