ಅ.21ರಂದು ಬುಡೋಳಿಯಲ್ಲಿ ರಕ್ತದಾನ ಶಿಬಿರ

Update: 2018-10-20 07:54 GMT

ಬಂಟ್ವಾಳ, ಅ.20: ಬುಡೋಳಿ ಯೂತ್ ಫೆಡರೇಶನ್ (ಬಿವೈಎಫ್) ವತಿಯಿಂದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಅ.21ರಂದು ಬುಡೋಳಿ ಜಂಕ್ಷನ್ ನಲ್ಲಿ 'ರಕ್ತದಾನ ಶಿಬಿರ' ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 9 ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಆರಂಭವಾಗಲಿದೆ. ಅಬೂಬಕರ್ ಫೈಝಿ ಕಾರ್ಯಕ್ರಮ ಉದ್ಘಾಟಿಸುವರು. ಟಿ.ಪಿ.ಜಮಾಲುದ್ದೀನ್ ದಾರಿಮಿ ಪ್ರಾರ್ಥನೆ ನೇತೃತ್ವ, ವಿಟ್ಲ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಎಸ್.ಯಲ್ಲಪ್ಪ ಸಭಾಧ್ಯಕ್ಷತೆ ವಹಿಸುವರು. ಇದೇ ಸಂದರ್ಭ ಅರ್ಮಾನುದ್ದೀನ್ ದಾವೂದ್ ಅನ್ಸಾರಿ ಹಾಗೂ ಯಶಸ್ವಿ ಎಂಬುವವರನ್ನ ಸನ್ಮಾನಿಸಲಾಗುವುದು.

ಮುಖ್ಯ ಅತಿಥಿಗಳಾಗಿ ಪೆರಾಜೆ ಗ್ರಾಪಂ ಅಧ್ಯಕ್ಷೆ ಪುಷ್ಪಾ, ಪತ್ರಕರ್ತ ಶಂಶೀರ್ ಬುಡೋಳಿ, ಕುಶಲ ಎಂ. ಪೆರಾಜೆ, ಅಝೀಝ್ ಪಾರ್ಪಕಜೆ, ಅಬ್ದುಲ್ ಮಜೀದ್ ದಾರಿಮಿ, ಡಾ.ಮನೋಹರ್ ರೈ, ಶಿಕ್ಷಕ ಸಂಜೀವ್ ಮಂ‍ಚಿ, ಫೈರೋಝ್ ವಳಚ್ಚಿಲ್, ಹಾಜಿ ಉಮರ್ ಬಿ., ನೀಲಯ್ಯ ಪೂಜಾರಿ, ಶಿಕ್ಷಕ ಸಂಜೀವ್ ನಾಯ್ಕ್, ಹಾಜಿ ರಫೀಕ್ ಸುಲ್ತಾನ್, ಇಬ್ರಾಹೀಂ ರಾಜ್ ಕಮಲ್, ಮುಹಮ್ಮದ್ ಅಶ್ರಫ್ ಸತ್ತಿಕ್ಕಲ್ಲು, ಇಕ್ಬಾಲ್ ಬಿ., ಹಬೀಬ್ ಶೇರ, ವಸಂತ, ಶಂಶೀರ್ ಶೇರಾ ಹಾಗೂ ಅಬ್ದುಲ್ ರಶೀದ್ ಜೋಗಿಬೆಟ್ಟು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News