ದಂಪತಿ ಕೊಲೆಗೈದ ಶಂಕಿತ ಆರೋಪಿಯ ಸಹೋದರನ ಥಳಿಸಿ ಹತ್ಯೆಗೈದ ಉದ್ರಿಕ್ತ ಗುಂಪು

Update: 2018-10-20 16:22 GMT

ಗುವಾಹತಿ, ಅ. 20: ದಂಪತಿಯನ್ನು ಹತ್ಯೆ ನಡೆಸಿದ ದಿನದ ಬಳಿಕ ಶಂಕಿತ ಆರೋಪಿಯ ಸಹೋದರನನ್ನು ಉದ್ರಿಕ್ತ ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಅಸ್ಸಾಂನ ಚಹಾ ತೋಟದಲ್ಲಿ ಶುಕ್ರವಾರ ನಡೆದಿದೆ. ಜಗ್ಗು ಪ್ರಜಾ ಎಂದು ಗುರುತಿಸಲಾದ ವ್ಯಕ್ತಿ ಗುರುವಾರ ಸಂಜೆ ಭೋಲಾ ಪ್ರಜಾ ಹಾಗೂ ರಾಮೋನಿ ದಂಪತಿಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದ ಎಂದು ಮೇಲಿನ ಅಸ್ಸಾಂನ ದಿಬ್ರುಗಢ ಜಿಲ್ಲೆಯ ಮೊರಾನ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ದೀಪೇಂದ್ರ ಚೇತ್ರಿ ತಿಳಿಸಿದ್ದಾರೆ.

ಆತ ದಂಪತಿಯನ್ನು ಮಚ್ಚಿನಿಂದ ಕಡಿದು ಹತ್ಯೆಗೈದಿದ್ದ. ಬೋಲಾ ಹಾಗೂ ಅವರ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದರು. ಪೊಲೀಸರು ಬರುವವರೆಗೆ ಮೃತದೇಹ ಸ್ಥಳದಲ್ಲೇ ಬಿದ್ದಿದ್ದವು ಎಂದು ಚೇತ್ರಿ ತಿಳಿಸಿದ್ದಾರೆ. ದಂಪತಿ ಚಹಾ ತೋಟದಲ್ಲಿ ಖಾಯಂ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆರೋಪಿ ಕೂಡ ಅದೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News