ಬಾಲಕನನ್ನು ಥಳಿಸಿ ಕೊಂದ ಆರೋಪದಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲು

Update: 2018-10-21 10:22 GMT

ಲಕ್ನೋ, ಅ. 21: ಉತ್ತರ ಪ್ರದೇಶದ ಸದಿಮದನ್ಪಟ್ ನಲ್ಲಿ ವಿದ್ಯಾರ್ಥಿಗೆ ಥಳಿಸಿ ಆತನ ಸಾವಿಗೆ ಕಾರಣನಾದ ಆರೋಪ ಹೊತ್ತಿರುವ ಅಧ್ಯಾಪಕ ಜೈರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಂದಾ ಜಿಲ್ಲೆಯ ಸದಿಮದನ್ಪಟ್ ನ ಖಾಸಗಿ ಶಾಲೆಯ 8ರ ಹರೆಯದ ಬಾಲಕ ಅರ್ಬಾಜ್ ಗೆ  ಮಂಗಳವಾರ ಶಾಲೆಯಲ್ಲಿ ಶಿಕ್ಷಕ ಜೈರಾಜ್ ಥಳಿಸಿದರೆನ್ನಲಾಗಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಅರ್ಬಾಜ್ ನ್ನು ಆತನ ಹೆತ್ತವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರ್ಬಾಜ್ ಶುಕ್ರವಾರ ಮೃತಪಟ್ಟಿದ್ದನು.

ಈ ಸಂಬಂಧ ಮೃತ ಬಾಲಕನ ಹೆತ್ತವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News