ಸುಪ್ರೀಂ ಕೋರ್ಟ್ ಆದೇಶ ವಿರುದ್ಧ ಶಬರಿಮಲೆಯಲ್ಲಿ ಪ್ರತಿಭಟನೆ: 210 ಮಂದಿ ವಿರುದ್ಧ ಪ್ರಕರಣ ದಾಖಲು

Update: 2018-10-25 05:21 GMT

ಕಾಸರಗೋಡು, ಅ. 24: ಶಬರಿಮಲೆಯಲ್ಲಿ ವಯೋಮಿತಿಯ ಮಹಿಳೆಯರ ಪ್ರವೇಶ ಕುರಿತ ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನ ವಿರುದ್ಧ ಶಬರಿಮಲೆಯಲ್ಲಿ ಪ್ರತಿಭಟನೆ ನಡೆಸಿ ಹಿಂಸಾತ್ಮಕ ಘಟನೆಗೆ ಕಾರಣರಾದವರ ವಿರುದ್ಧ  ಪೊಲೀಸರು ಕ್ರಮಕ್ಕೆ  ಮುಂದಾಗಿದ್ದು, 210 ಮಂದಿಯ  ದೃಶ್ಯಗಳನ್ನು  ಬಿಡುಗಡೆ ಮಾಡಿದೆ.

ಅವರ ವಿರುದ್ಧ  ಗುಂಪು ಸೇರಿ ಹಲ್ಲೆ,  ಸಾರ್ವಜನಿಕ ಸೊತ್ತು ಹಾನಿ ಸೇರಿದಂತೆ ಜಾಮೀನುರಹಿತ ಮೊಕದ್ದಮೆಗಳನ್ನು ಹೂಡಲಾಗಿದೆ. 

ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಹಾನಿ, ಪೊಲೀಸರ ವಾಹನಗಳ  ಧ್ವಂಸ, ಮಹಿಳಾ ಪತ್ರಕರ್ತರ ಮೇಲೆ ಹಲ್ಲೆ ಮೊದಲಾದ ಮೊಕದ್ದಮೆಗಳನ್ನು ಹೂಡಲಾಗಿದ್ದು,  20 ರಷ್ಟು ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

ನೀಲಕ್ಕಲ್ ನಿಂದ ಪಂಪಾ ತನಕ ಅಲ್ಲದೆ ಸನ್ನಿದಾನದಲ್ಲೂ ಮಹಿಳೆಯರನ್ನು ತಡೆದವರ ವಿರುದ್ಧವೂ ಪೊಲೀಸರು ಕ್ರಮ ತೆಗೆದುಕೊಳ್ಳತೊಡಗಿದ್ದು,  ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮೂರು ಸಾವಿರದಷ್ಟು ಮಂದಿ ಹಿಂಸಾತ್ಮಕ ಘಟನೆಗೆ ಕಾರಣರಾಗಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಈಗ  ಸಂಗ್ರಹಿಸಿರುವ ಚಿತ್ರಗಳನ್ನು ಆಯಾ ಜಿಲ್ಲಾ  ಪೊಲೀಸರಿಗೆ ರವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News