ಸುಬ್ರಹ್ಮಣ್ಯ: ಸಂಘ ಪರಿವಾರ ಮುಖಂಡರ ನಡುವೆ ಘರ್ಷಣೆ ಖಂಡಿಸಿ ಪ್ರತಿಭಟನೆ
Update: 2018-10-25 07:47 GMT
ಸುಬ್ರಹ್ಮಣ್ಯ, ಅ. 25: ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಬುಧವಾರ ಸಂಜೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯದರ್ಶಿ ಗುರುಪ್ರಸಾದ್ ಪಂಜ ಮೇಲೆ ಚೈತ್ರಾ ಕುಂದಾಪುರ ಮತ್ತು ತಂಡ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಇಂದು ಬಂದ್ಗೆ ಕರೆ ನೀಡಲಾಗಿದ್ದು, ಸುಬ್ರಹ್ಮಣ್ಯದಲ್ಲಿ ಅಂಗಡಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ನಡೆಸಿದದರು.
ಈ ಸಂದರ್ಭ ಚೈತ್ರಾ ಕುಂದಾಪುರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆ ಜಾಥ ನಗರದ ಮುಖ್ಯ ಪೇಟೆಯಿಂದ ಕುಮಾರಧಾರೆ ತನಕ ತೆರಳಿತು. ಐನೂರಕ್ಕೂ ಅಧಿಕ ಮಂದಿ ಪ್ರತಿಭಟನೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.