ಕಾರ್ಕಳ: ಬಸ್ಸಿನಡಿಗೆ ಬಿದ್ದು ಪ್ರಯಾಣಿಕ ಮೃತ್ಯು

Update: 2018-10-27 16:47 GMT

ಕಾರ್ಕಳ, ಅ.27: ಬಸ್ ಹತ್ತುತ್ತಿದ್ದ ವೇಳೆ ಚಾಲಕ ಒಮ್ಮೇಲೆ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಚಕ್ರದಡಿಗೆ ಬಿದ್ದ ಪ್ರಯಾಣಿಕರೊಬ್ಬರು ಗಂಭೀರ ವಾಗಿ ಗಾಯಗೊಂಡು ಮೃತಪಟ್ಟ ಘಟನೆ ಅ.26ರಂದು ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮೃತರನ್ನು ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಸಂಜೀವ ಮೂಲ್ಯ (65) ಎಂದು ಗುರುತಿಸಲಾಗಿದೆ. ಇವರು ಸಂಜೆ 6:40ರ ಸುಮಾರಿಗೆ ಸಚ್ಚರಿ ಪೇಟೆಯಿಂದ ಬೊಮ್ಮಯ್ಯ ಲಚ್ಚಿಲ್ ಎಂಬಲ್ಲಿಗೆ ಹೋಗಲು ಸಚ್ಚರಿಪೇಟೆ ಬಸ್ ನಿಲ್ದಾಣದಲ್ಲಿ ಶ್ರೀದೇವಿ ಬಸ್ ಹತ್ತುತ್ತಿದ್ದಾಗ, ಚಾಲಕನ ಬಸ್ಸನ್ನು ಒಮ್ಮೇಲೆ ಮುಂದಕ್ಕೆ ಚಲಾಯಿಸಿದರೆನ್ನಲಾಗಿದೆ.

ಈ ವೇಳೆ ಸಂಜೀವ ಮೂಲ್ಯ ಆಯತಪ್ಪಿರಸ್ತೆಗೆ ಬಿದಿದ್ದು, ಅವರ ಮೇಲೆ ಬಸ್ಸಿನ ಹಿಂದಿನ ಚಕ್ರ ಹಾದುಹೋಯಿತು. ಇದರಿಂದ ಗಂಭೀರವಾಗಿ ಗಾಯ ಗೊಂಡ ಅವರು ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11:30ರ ಸುಮಾರಿಗೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News