ಬಾವಿಗೆ ಬಿದ್ದು ಮಹಿಳೆ ಮೃತ್ಯು

Update: 2018-10-28 16:24 GMT

ಬ್ರಹ್ಮಾವರ, ಅ.28: ಆವರಣ ಇಲ್ಲದ ಬಾವಿಗೆ ಕಾಲುಜಾರಿ ಬಿದ್ದು ಮಹಿಳೆ ಯೊಬ್ಬರು ಮೃತಪಟ್ಟ ಘಟನೆ ಅ. 27ರಂದು ರಾತ್ರಿ 9.45ರ ಸುಮಾರಿಗೆ ನೀಲಾವರ ಗ್ರಾಮದ ಸೊನಗಾರ ಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ರತ್ನ ಗಾಣಿಗ (65) ಎಂದು ಗುರುತಿಸಲಾಗಿದೆ. ಪಾತ್ರೆ ತೊಳೆಯಲು ಮನೆಯ ಹೊರಗೆ ಹೋದ ರತ್ನಾ ಗಾಣಿಗ ಅಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಅವರು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News