ಎಸ್ಸೆಸ್ಸೆಫ್ ಬಜಾಲ್ ನಂತೂರ್ ಶಾಖೆಯಿಂದ ಯುನಿಟ್ ಕಾನ್ಫರೆನ್ಸ್

Update: 2018-10-29 06:12 GMT

ಮಂಗಳೂರು  ಅ.29: ಎಸ್ಸೆಸ್ಸೆಫ್ ಬಜಾಲ್ ನಂತೂರ್ ಶಾಖೆಯ ವತಿಯಿಂದ ಶನಿವಾರ ಯೂನಿಟ್ ಸಮ್ಮೇಳನ ಬಜಾಲ್ ನಂತೂರ್ ಜಂಕ್ಷನ್ ನಲ್ಲಿ  ನಡೆಯಿತು

ಹಾರಿಸ್ ಶಾಂತಿನಗರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸ್ಥಳೀಯ ಖತೀಬ್  ಇಲ್ಯಾಸ್ ಅಮ್ಜದಿ ಉದ್ಘಾಟಿಸಿದರು.

ಸೈಯದ್ ತ್ವಾಹ ತಂಙಳ್ ಮಹ್ಲರತುಲ್ ಬದ್ರಿಯ್ಯದ ನೇತೃತ್ವ ವಹಿಸಿದ್ದರು. ಎಸ್ಸೆಸ್ಸೆಫ್ ಮಂಗಳೂರು ಡಿವಿಷನ್ ಕೋಶಾಧಿಕಾರಿ ನವಾಝ್ ಸಖಾಪಿ ಅಡ್ಯಾರ್ ಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮರುಲ್ ಫಾರೂಕ್ ಸಖಾಪಿ ಕಾಟಿಪಳ್ಳ ಮುಖ್ಯ ಭಾಷಣ ಮಾಡಿದರು.

ಮುಖ್ಯ ಅತಿಥಿಯಾಗಿ  ಬಜಾಲ್ ನಂತೂರ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುರ್ರವೂಫ್, ಬಜಾಲ್ ಕುತುಬಿಯ್ಯತ್ ಕಮಿಟಿಯ ಅಧ್ಯಕ್ಷ ಅಶ್ರಫ್ ಕರಿಬೊಟ್ಟು, ಬಿ.ಎನ್.ಅಬ್ಬಾಸ್ ಹಾಜಿ, ಹುಸೈನ್ ಶಾಂತಿನಗರ, ಸಲಾಂ ಫೈಸಲ್ ನಗರ, ನಝೀರ್ ಬಜಾಲ್, ಎಸ್ಸೆಸ್ಸೆಫ್ ಮಂಗಳೂರು ಸೆಕ್ಟರ್  ಅಧ್ಯಕ್ಷ ಕೆ.ಸಿ.ಸುಲೈಮಾನ್ ಉಸ್ತಾದ್, ಉಪಾಧ್ಯಕ್ಷರಾದ ಶಾಫಿ ಮಿಸ್ಬಾಹಿ ಬಜಾಲ್, ಇಕ್ಬಾಲ್ ಅಹ್ಸನಿ ಉಪಸ್ಥಿತರಿದ್ದರು.

ನಾಸಿರ್ ಫಾಳಿಲಿ ಬಜಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News