ಮೋದಿಯನ್ನು ಚೇಳಿಗೆ ಹೋಲಿಸಿದ್ದ ತರೂರ್ ವಿರುದ್ಧ ಮಾನಹಾನಿ ಪ್ರಕರಣ ದಾಖಲು

Update: 2018-11-03 14:12 GMT

ಹೊಸದಿಲ್ಲಿ,ನ.3: ಪ್ರಧಾನಿ ನರೇಂದ್ರ ಮೋದಿಯವರನ್ನು ಚೇಳಿಗೆ ಹೋಲಿಸಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಾಗಿದೆ.

ತರೂರ್ ಅವರ ದುರುದ್ದೇಶಪೂರಿತ ಹೇಳಿಕೆಯು ಹಿಂದೂ ದೇವರನ್ನು ನಿಂದಿಸಿದ್ದು ಮಾತ್ರವಲ್ಲ,ಮಾನಹಾನಿಕರವೂ ಆಗಿದೆ. ತಾನು ಮೋದಿ ಮತ್ತು ಬಿಜೆಪಿಯ ಬೆಂಬಲಿಗ ಮತ್ತು ಕಾರ್ಯಕರ್ತನಾಗಿದ್ದು,ತರೂರ್ ಹೇಳಿಕೆಯು ತನ್ನ ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿದೆ ಎಂದು ದಿಲ್ಲಿ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ರಾಜೀವ ಬಬ್ಬರ್ ಅವರು ನ್ಯಾಯವಾದಿ ನೀರಜ್ ಮೂಲಕ ದಾಖಲಿಸಿರುವ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

 ಮೋದಿ ಶಿವಲಿಂಗದ ಮೇಲಿನ ಚೇಳಿದ್ದಂತೆ. ಅದನ್ನು ಕೈಯಿಂದ ತೆಗೆಯಲೂ ಆಗುವುದಿಲ್ಲ,ಚಪ್ಪಲಿಯಿಂದ ಹೊಡೆಯಲೂ ಆಗುವುದಿಲ್ಲ ಎಂದು ಆರ್‌ಎಸ್‌ಎಸ್ ಮೂಲವೊಂದನ್ನು ಉಲ್ಲೇಖಿಸಿ ತರೂರ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News