ಭಾರತಕ್ಕೆ 5 ವಿಕೆಟ್ಗಳ ಜಯ
ಕೋಲ್ಕತಾ , ನ.4: ವೆಸ್ಟ್ಇಂಡೀಸ್ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ 5 ವಿಕೆಟ್ಗಳ ಜಯ ಗಳಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 110 ರನ್ಗಳ ಸವಾಲನ್ನು ಪಡೆದ ಭಾರತ 17.5 ಓವರ್ಗಳಲ್ಲಿ 5 ವಿಕೆಟ್ ನಷ್ಟದಲ್ಲಿ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
ದಿನೇಶ್ ಕಾರ್ತಿಕ್ ಔಟಾಗದೆ 31 ರನ್ , ಕೃಣಾಲ್ ಪಾಂಡ್ಯ ಔಟಾಗದೆ 21 ರನ್ ಮತ್ತು ಮನೀಷ್ ಪಾಂಡೆ 19 ರನ್ ಗಳಿಸಿ ತಂಡಕ್ಕೆ ಸುಲಭದ ಗೆಲುವಿಗೆ ನೆರವಾದರು. ಭಾರತ 7.3 ಓವರ್ಗಳಲ್ಲಿ 45 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಮನೀಷ್ ಪಾಂಡೆ ಮತ್ತು ದಿನೇಶ್ ಕಾರ್ತಿಕ್ ತಂಡದ ಬ್ಯಾಟಿಂಗ್ನ್ನು ಮುನ್ನಡೆಸಿ 4ನೇ ವಿಕೆಟ್ಗೆ 38 ರನ್ ಸೇರಿಸಿದರು. ಒಶಾನ್ ಥಾಮಸ್ ಮತ್ತು ನಾಯಕ ಕಾರ್ಲೊಸ್ ಬ್ರಾತ್ವೇಟ್ ಅವರು ಭಾರತಕ್ಕೆ ಆರಂಭಿಕ ಆಘಾತ ನೀಡಿದರು. ನಾಯಕ ರೋಹಿತ್ ಶರ್ಮಾ (6), ಶಿಖರ್ ಧವನ್(3), ಲೋಕೇಶ್ ರಾಹುಲ್ (16) ಮತ್ತು ರಿಷಭ್ ಪಂತ್(1) ಬೇಗನೆ ಔಟಾಗಿದ್ದರು..