ಶಬರಿಮಲೆ:ಮಹಿಳಾ ಯಾತ್ರಿಗೆ ಹಲ್ಲೆ ಗೈದ ಯುವಕನ ಸೆರೆ

Update: 2018-11-07 17:21 GMT

ತಿರುವನಂತಪುರ,ನ.7: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 50 ವರ್ಷಕ್ಕಿಂತ ಕಡಿಮೆ ಪ್ರಾಯದವರೆಂದು ಶಂಕಿಸಿ ಮಹಿಳೆಯೋರ್ವಳ ಮೇಲೆ ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ ಯುವಕನೋರ್ವನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣಂಥಿಟ್ಟ ಜಿಲ್ಲೆಯ ಇಳಂತೂರು ನಿವಾಸಿ ಸೂರಜ್(29) ಬಂಧಿತ ವ್ಯಕ್ತಿಯಾಗಿದ್ದು,ಮಂಗಳವಾರ ನಡೆದ ಘಟನೆಯ ಪ್ರಮುಖ ಆರೋಪಿಗಳಲ್ಲೋರ್ವನಾಗಿದ್ದಾನೆ.
 ನೂರಾರು ಪ್ರತಿಭಟನಕಾರರು ಲಲಿತಾ ರವಿ ಎಂಬ 52ರ ಹರೆಯದ ಮಹಿಳೆಯ ಮೇಲೆ ಹಲ್ಲೆ ನಡೆಸಿ,ಆಕೆ ಸನ್ನಿಧಾನವನ್ನು ಪ್ರವೇಶಿಸುವುದನ್ನು ತಡೆಯಲು ಪ್ರಯತ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News