ಕ್ಯಾಂಪಸ್ ಫ್ರಂಟ್ ಸವಣೂರು ವಲಯ ಕ್ರೀಡಾಕೂಟ

Update: 2018-11-09 04:37 GMT

ಪುತ್ತೂರು, ನ.9: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಸವಣೂರು ವಲಯ ಸಮಿತಿಯ ವತಿಯಿಂದ ಕ್ಯಾಂಪಸ್ ಡೇ ಪ್ರಯುಕ್ತ ಗುರುವಾರ ಇಲ್ಲಿನ ಅತ್ತಿಕೆರೆ ಮೈದಾನದಲ್ಲಿ ಕ್ರೀಡಾಕೂಟ ನಡೆಸಲಾಯಿತು.

ಕ್ರೀಡಾಕೂಟವನ್ನು ಕ್ಯಾಂಪಸ್ ಫ್ರಂಟ್ ಸವಣೂರು ವಲಯ ಅಧ್ಯಕ್ಷ ಹಾಶಿರ್ ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಅಧ್ಯಕ್ಷ ಸವಾದ್ ಕಲ್ಲಾರ್ಪೆ ವಹಿಸಿದ್ದರು.

ಕ್ಯಾಂಪಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಮ್ರಾನ್ ಪಿ.ಜೆ., ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಫೀಕ್ ಎಂ.ಎ. ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ್ಯಾಂಪಸ್ ಫ್ರಂಟ್ ಪುತ್ತೂರು ತಾಲೂಕು ಕಾರ್ಯದರ್ಶಿ ರಿಯಾಝ್ ಅಂಕತ್ತಡ್ಕ, ಸದಸ್ಯರಾದ ಸಂಶೀರ್ ಸವಣೂರು, ದುಬೈ ಉದ್ಯಮಿಗಳಾದ ಅಝೀಝ್ ಎಸ್.ಎಂ., ರಿಯಾದ್ ಉದ್ಯಮಿಗಳಾದ ರಝಾಕ್ ಚಾಪಳ್ಳ, ಸವಣೂರು ಯುವ ಉದ್ಯಮಿಗಳಾದ ಅಶ್ರಫ್ ಕಂಪ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸವಣೂರು ಡಿವಿಷನ್ ಕಾರ್ಯದರ್ಶಿ ರಫೀಕ್ ಪಿ., ಎಡಿಐಬಿ ಇಸ್ಲಾಮಿಕ್ ಬ್ಯಾಂಕ್ ಅಬುಧಾಬಿ ಇದರ ಮುಸ್ತಫ ಕೇಕುಡೆ, ಎಸ್.ಡಿ.ಎ.ಯು ಪುತ್ತೂರು ಅಧ್ಯಕ್ಷ ಮಹಮ್ಮದ್ ಕುಂಞ ಬಾಬಾ, ಎಸ್.ಡಿ.ಪಿ.ಐ ಸವಣೂರು ವಲಯ ಕಾರ್ಯದರ್ಶಿ ಅಶ್ರಫ್ ಜನತಾ, ಸಲೀಂ ಯು.ಎಸ್., ಶಫೀಕ್ ಶಾಂತಿನಗರ, ಸಮೀರ್ ಶೈನ್ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಹಗ್ಗಜಗ್ಗಾಟ, ರಿಲೇ, ಓಟ ಇನ್ನಿತರ ಕ್ರೀಡೆಗಳನ್ನು ಹಮ್ಮಿಕೊಳ್ಳಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ರಶೀದ್ ಪರಣೆ ಕಾರ್ಯಕ್ರಮ ನಿರೂಪಿಸಿದರು. ನಝೀರ್ ಶಾಂತಿನಗರ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News