ಹೇರಿಕುದ್ರು ಸೇತುವೆಯಲ್ಲಿ ಸರಣಿ ಅಪಘಾತ: ಐವರಿಗೆ ಗಾಯ
Update: 2018-11-11 16:42 GMT
ಕುಂದಾಪುರ, ನ.11: ಕುಂದಾಪುರ ಸಂಗಮ್ ಸಮೀಪದ ಹೇರಿಕುದ್ರು ಸೇತುವೆಯಲ್ಲಿ ರವಿವಾರ ಕಾರು, ಲಾರಿ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಐವರು ಗಾಯಗೊಂಡ ಬಗ್ಗೆ ವರದಿಯಾಗಿದೆ.
ಗಾಯಗೊಂಡವರನ್ನು ಕಾರಿನಲ್ಲಿದ್ದ ಉಡುಪಿಯ ಇಂದ್ರಾಳಿ ನಿವಾಸಿಗಳಾದ ಶಿವರಾಮ ಆಚಾರ್, ಆಶಾ, ವಸಂತಿ ಹಾಗೂ ಗಾಯತ್ರಿ ಮತ್ತು ಕಾರು ಚಲಾಯಿಸು ತ್ತಿದ್ದ ಶ್ರೀನಿವಾಸ್ ಆಚಾರ್ ಎಂದು ಗುರುತಿಸಲಾಗಿದೆ. ಇವರೆಲ್ಲ ಕಾರಿನಲ್ಲಿ ಉಡುಪಿಯಿಂದ ಮುರ್ಡೇಶ್ವರಕ್ಕೆ ಮದುವೆ ಸಮಾರಂಭಕ್ಕೆಂದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆಯಿತು.
ಇದರ ಪರಿಣಾಮ ಕಾರು ಎದುರಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತ ದಿಂದ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಈ ಬಗ್ಗೆ ಕುಂದಾ ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.