ಯುವಕನಿಗೆ ಚೂರಿ ಇರಿತ: ದೂರು ದಾಖಲು

Update: 2018-11-11 17:14 GMT

ಪಡುಬಿದ್ರೆ, ನ. 11: ಹೆಜಮಾಡಿಯ ಗುಡ್ಡೆ ಅಂಗಡಿ ಎಂಬಲ್ಲಿ ಯುವಕನೋರ್ವನಿಗೆ ಆತನ ಸಂಬಂಧಿಯೋರ್ವ ಚೂರಿ ಇರಿದು ಗಾಯಗೊಳಿಸಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಕೀರ್ತನ್ ಕುಮಾರ್ ಎಂಬವರು ತನ್ನ ಸ್ನೇಹಿತರೊಂದಿಗೆ ಮೆಹಂಡಿ ಕಾರ್ಯಕ್ರಮ ಮುಗಿಸಿ ಕುಳಿತಿದ್ದಾಗ ಆತನ ದೊಡ್ಡಪ್ಪನ ಮಗ ಅರುಣ್ ಎಂಬಾತ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಚೂರಿ ಇರಿದಿದ್ದಾನೆ ಎನ್ನಲಾಗಿದೆ. ತೀವ್ರ ಗಾಯಗೊಂಡ ಕೀರ್ತನ್ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 

ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News