ನ.16: ಉಮ್ರಾ ತರಬೇತಿ ಶಿಬಿರ

Update: 2018-11-13 18:01 GMT

ಮಂಗಳೂರು, ನ.13: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ (ಕಿಸಾ)ಯಿಂದ ಉಮ್ರಾ ಯಾತ್ರಾ ಗೈಡ್ ಹಾಗೂ ತರಬೇತಿ ಶಿಬಿರವನ್ನು ನ.16ರಂದು ಮಧ್ಯಾಹ್ನ 2ಗಂಟೆಗೆ ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸುನ್ನಿ ಸಂದೇಶ ಸಂಪಾದಕ ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ನೇತೃತ್ವದಲ್ಲಿ ತರಬೇತಿ ಶಿಬಿರ ನಡೆಯಲಿದೆ.

ಕಿಸಾದಿಂದ ಪ್ರತೀ ತಿಂಗಳು ಹೊರಡುವ ಉಮ್ರಾ ಯಾತ್ರೆಯ ನವೆಂಬರ್ ತಿಂಗಳ ರಬೀವುಲ್ ಅವ್ವಲ್ ವಿಶೇಷ ಉಮ್ರಾ ಪ್ಯಾಕೇಜ್ ನ. 25ರಂದು 65 ಉಮ್ರಾ ಯಾತ್ರಿಗಳನ್ನು ಒಳಗೊಂಡ ತಂಡ ಮಂಗಳೂರಿನಿಂದ ಹೊರಡಲಿದೆ ಎಂದು ಮುಸ್ತಫಾ ಫೈಝಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News