ಬಜ್ಪೆಯಲ್ಲಿ ಮಟ್ಕಾ ದಂಧೆ: ಇಬ್ಬರು ಆರೋಪಿಗಳ ಬಂಧನ

Update: 2018-11-14 06:29 GMT

ಮಂಗಳೂರು, ನ.14: ನಗರ ಹೊರವಲಯದ ಬಜ್ಪೆ ಬಳಿಯ ಪೆರ್ಮುದೆ ಎಂಬಲ್ಲಿ ಹೋಟೆಲ್‌ವೊಂದರ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಉತ್ತರ ಪೊಲೀಸ್ ಉಪವಿಭಾಗದ ರೌಡಿ ನಿಗ್ರಹ ದಳ ಬಂಧಿಸಿದೆ.

ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ ಮಂಗಳೂರು ನಗರ ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಪೆರ್ಮುದೆ ನಿವಾಸಿ ರುಕ್ಕಯ್ಯ(48) ಹಾಗೂ ಮರಕಡದ ಕೋರಂಟಾಡಿ ನಿವಾಸಿ ಅರುಣ್ ಡಿಸೋಜ(43) ಎಂಬವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 7,127 ರೂ. ನಗದು, 3 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News