ಸಂಸದ ನಳಿನ್ ಸಾಧನೆಯ ಪುಸ್ತಕ ಬಿಡುಗಡೆಗೊಳಿಸಿದ ಅಮಿತ್ ಶಾ

Update: 2018-11-15 04:40 GMT

ಮಂಗಳೂರು, ನ.15: ನಗರದಲ್ಲಿ ನಡೆಯುತ್ತಿರುವ ಆರೆಸ್ಸೆಸ್ ಬೈಠಕ್‌ನಲ್ಲಿ ಪಾಲ್ಗೊಳ್ಳಲು ಬುಧವಾರ ರಾತ್ರಿ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಗರದ ಹೊಟೇಲ್‌ವೊಂದರಲ್ಲಿ ಉಳಿದುಕೊಂಡಿದ್ದು, ಇಂದು ಬೆಳಗ್ಗೆ ಮತ್ತೆ ಸಂಘ ನಿಕೇತನಕ್ಕೆ ತೆರಳಿದರು.

ಬುಧವಾರ ರಾತ್ರಿ 8:30ರ ಸುಮಾರಿಗೆ ಮಂಗಳೂರಿಗೆ ಆಗಮಿಸಿದ ಅಮಿತ್ ಶಾ ನಗರದ ಸಂಘ ನಿಕೇತನದಲ್ಲಿ ನಡೆಯುತ್ತಿರುವ ಆರೆಸ್ಸೆಸ್ ದಕ್ಷಿಣ ಭಾರತ ಮಟ್ಟದ ಬೈಠಕ್‌ನಲ್ಲಿ ಪಾಲ್ಗೊಂಡಿದ್ದರು. ಬಳಿಕ ನಗರದ ಓಶಿಯನ್ ಪರ್ಲ್ ಹೋಟೇಲ್‌ನಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಸಂಸದರಾಗಿ ನಳಿನ್ ಕುಮಾರ್ ಅವರ ನಾಲ್ಕು ವರ್ಷಗಳ ಜನಸೇವೆಯನ್ನು ಬಿಂಬಿಸುವ ‘ಮೋದಿಯ ಹಾದಿಯಲ್ಲಿ 4ನೇ ವರ್ಷ’ ಪುಸ್ತಕವನ್ನು ಓಶಿಯನ್ ಪರ್ಲ್ ಪ್ರಾಂಗಣದಲ್ಲಿ ಅಮಿತ್ ಶಾ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಸದ ನಳಿನ್ ಕುಮಾರ್, ಮುಖಂಡ ಹರಿಕೃಷ್ಣ ಬಂಟ್ವಾಳ್ ಉಪಸ್ಥಿತರಿದ್ದರು.

ಹೋಟೆಲ್‌ನಿಂದ ಮತ್ತೆ ಸಂಘ ನಿಕೇತನಕ್ಕೆ ತೆರಳಿದ ಅಮಿತ್ ಶಾ ಅಲ್ಲಿ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಜೋಶಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಬಳಿಕ ಅಲ್ಲಿಂದ ದಿಲ್ಲಿಯತ್ತ ಪಯಣ ಆರಂಭಿಸಲಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News