ನ.18: ಶಕ್ತಿ ಸಾಹಿತ್ಯ-ಸಾಂಸ್ಕತಿಕ ವೇದಿಕೆಯಿಂದ ಅನುಭಾವ ಸಂಗಮ

Update: 2018-11-16 13:59 GMT

ಮಂಗಳೂರು, ನ.16: ಶಕ್ತಿನಗರದಲ್ಲಿ ಮಹಾಜಗದ್ಗುರು ಬಸವಣ್ಣ ಚಾರಿಟೇಬಲ್ ಟ್ರಸ್ಟ್ ಹಾಗೂ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಿಂದ ನ.18ರಂದು ಪೂರ್ವಾಹ್ನ 11ಕ್ಕೆ ಶಕ್ತಿ ಪದವಿ ಪೂರ್ವ ಕಾಲೀಜಿನ ಪ್ರಾಚಾರ್ಯರ ಮನೆಯಲ್ಲಿ ಅನುಭಾವ ಸಂಗಮ ಕಾರ್ಯಕ್ರಮ ನಡೆಯಲಿದೆ.

ಅಂದು ‘ವಚನಗಳಲ್ಲಿ ಜೀವನ ಮೌಲ್ಯಗಳು’ ಎಂಬ ಉಪನ್ಯಾಸವನ್ನು ಶರಣ ಜಗನ್ನಾಥಪ್ಪಪನ್ಸಾಲೆ, ಜನವಾಡಾ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ಪಪೂ ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್. ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ.ನಾಕ್, ಕಾರ್ಯದರ್ಶಿ ಬೈಕಾಡಿ ಜನಾರ್ದನ ಆಚಾರ್, ಕೋಶಾಧಿಕಾರಿ ರಮೇಶ ಕೆ., ಅನುಭಾವ ಸಂಗಮ ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಶರಣ ಗುಂಡಪ್ಪ ವಿಠಲಾ ಪಾಲ್ಗೊಳ್ಳಲಿದ್ದಾರೆ. ಕನ್ನಡ ತುಳು ವಚನಗಳ ಗಾಯನವನ್ನು ರತ್ನಾವತಿ ಬೈಕಾಡಿ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News