ಪಿಡಿಒ ಕರ್ತವ್ಯಕ್ಕೆ ಅಡ್ಡಿ: ದೂರು

Update: 2018-11-16 15:27 GMT

ಶಂಕರನಾರಾಯಣ, ನ.16: ಮಹಿಳೆಯೊಬ್ಬರು ಶಂಕರನಾರಾಯಣ ಗ್ರಾಪಂ ಕಚೇರಿಗೆ ನುಗ್ಗಿ ಸೊತ್ತುಗಳನ್ನು ಹೊರಗೆ ಎಸೆದು ಪಿಡಿಓ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರೋಜಾ ದಾಸ್ ಎಂಬವರು ನ.14ರಂದು ಬೆಳಗ್ಗೆ ಶಂಕರನಾರಾಯಣ ಗ್ರಾಪಂ ಕಟ್ಟಡದ ಒಳಗೆ ಬಂದು ಮಾಜಿ ಗ್ರಾಪಂ ಅಧ್ಯಕ್ಷರಿಗೆ ಅವಾಚ್ಯ ಶಬ್ದ ಗಳಿಂದ ಬೈದು ಕಛೇರಿಯ ಕುರ್ಚಿ, ಟೇಬಲ್ ಹಾಗೂ ದಾಖಲೆ ಪತ್ರಗಳನ್ನು ಹೊರಗೆ ಎಸೆದು, ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಿಗೆ ಸಾರ್ವಜನಿಕ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News