ಸ್ಕೂಟರ್ ಅಪಘಾತ: ಸವಾರ ಮೃತ್ಯು

Update: 2018-11-16 15:28 GMT

ಬ್ರಹ್ಮಾವರ, ನ.16: ಕಾಡಿನ ಮಧ್ಯೆಯ ರಸ್ತೆಯಲ್ಲಿ ಸ್ಕೂಟರ್ ಸವಾರೊಬ್ಬರು ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ನ.16ರಂದು ಬೆಳಗ್ಗೆ ಕೆಂಜೂರು ಗ್ರಾಮದ ದ್ಯಾಗಲ್ ಎಂಬಲ್ಲಿ ನಡೆದಿದೆ.

ಮೃತರನ್ನು ಕೊಕ್ಕರ್ಣೆ ಕೆಳಪೇಟೆ ನಿವಾಸಿ ಶಶಿಧರ ನಾಯಕ್(48) ಎಂದು ಗುರುತಿಸಲಾಗಿದೆ.

ಇವರು ವ್ಯವಹಾರ ನಿಮಿತ್ತ ತನ್ನ ಟಿವಿಎಸ್ ಏಕ್ಸೆಲ್ ಸ್ಕೂಟರ್ ನಲ್ಲಿ ಕೊಕ್ಕರ್ಣೆಯಿಂದ ಸಂತೆಕಟ್ಟೆ ಕಡೆಗೆ ಹೋಗಿದ್ದು, ಕಾಡಿನ ಮಧ್ಯೆ ಯಾವುದೋ ಕಾಡು ಪ್ರಾಣಿ ಹಾರಿಯೋ ಅಥವಾ ಅವರ ಸ್ಕೂಟರ್ ನಿಯಂತ್ರಣ ತಪ್ಪಿಯೋ ಅಥವಾ ಸ್ಕೂಟರ್‌ಗೆ ಯಾವುದೋ ಡಿಕ್ಕಿ ಆಗಿಯೋ ಶಶಿಧರ ನಾಯಕ್ ಮೇಲೆ ಸ್ಕೂಟರ್ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News