ನ. 23: ದೇರಳಕಟ್ಟೆಯಲ್ಲಿ ಅನುಸ್ಮರಣಾ ಕಾರ್ಯಕ್ರಮ

Update: 2018-11-17 10:08 GMT

ಮಂಗಳೂರು, ನ. 17: ಎಂ ಎಸ್ ಎಫ್ ಹಾಗೂ ಮುಸ್ಲಿಂ ಯೂತ್ ಲೀಗ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಇತ್ತೀಚೆಗೆ ನಿಧನರಾದ ಮಂಜೇಶ್ವರ ಶಾಸಕ ಪಿ.ಬಿ ಅಬ್ದುರ್ರಝಾಕ್ ಸಾಹೇಬ್ ಹಾಗೂ ಮಾಜಿ ಶಾಸಕರಾದ ಚೆರ್ಕಳಂ ಅಬ್ದುಲ್ಲಾ ಅವರ ಅನುಸ್ಮರಣಾ ಕಾರ್ಯಕ್ರಮ ನ. 23ರ ಸಂಜೆ 5 ರಿಂದ ರಾತ್ರಿ 9 ರ ತನಕ ದೇರಳಕಟ್ಟೆಯ ಸಿಟಿ ಮೈದಾನದಲ್ಲಿ ನಡೆಯಲಿದೆ ಎಂದು ಎಂ ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಸ್ರಾರ್ ಗೂಡಿನಬಳಿ ಹೇಳಿದರು .

ಅನುಸ್ಮರಣಾ ಕಾರ್ಯಕ್ರಮದಲ್ಲಿ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯಾಧ್ಯಕ್ಷ ಸಯ್ಯಿದ್ ಮುನವ್ವರಲೀ ಶಿಹಾಬ್ ತಂಙಳ್ ,  ಮುಸ್ಲಿಂ ಯೂತ್ ಲೀಗ್ ಕರ್ನಾಟಕ ಉಸ್ತುವಾರಿ  ಸಯ್ಯಿದ್ ಮುಈನಲೀ ಶಿಹಾಬ್ ತಂಙಳ್, ಎಂ ಎಸ್ ಎಪ್ ರಾಷ್ಟ್ರಾಧ್ಯಕ್ಷ ಟಿ.ಪಿ ಅಶ್ರಫಲೀ ಸಾಹೇಬ್, ಎಂ ಎಸ್ ಎಪ್ ರಾಷ್ಟ್ರೀಯ ಕೋಶಾಧಿಕಾರಿ ನೌಶಾದ್ ಮಲಾರ್ , ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷ ಅಡ್ವಕೇಟ್ ಫೈಝಲ್ ಬಾಬು ತಿರೂರು, ಮುಸ್ಲಿಂ ಲೀಗ್ ದ.ಕ ಜಿಲ್ಲಾಧ್ಯಕ್ಷ ಸಿದ್ಧೀಖ್ ಅಬ್ದುಲ್ ಖಾದರ್ ಬಂಟ್ವಾಳ, ಮುಸ್ಲಿಂ ಲೀಗ್ ದ.ಕ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಟಿ.ಯು ಬಿ.ಸಿ.ರೋಡು ,ಮುಸ್ಲಿಂ ಲೀಗ್ ದ.ಕ ಕೋಶಾಧಿಕಾರಿ ತಬೂಕು ದಾರಿಮಿ ದೇರಳಕಟ್ಟೆ ,   ಮನ್ನಾರ್ಕಾಡ್ ಶಾಸಕರಾದ ಅಡ್ವಕೇಟ್ ಎನ್.ಶಂಸುದ್ಧೀನ್ , ಕಾಸರಗೋಡು ಶಾಸಕರಾದ ಎನ್.ನೆಲ್ಲಿಕುನ್ನು , ಎಂ ಎಸ್ ಎಪ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ಜಲೀಲ್ ನಂದಾವರ, ಎಂ ಎಸ್ ಎಪ್ ರಾಜ್ಯ ಕಾರ್ಯದರ್ಶಿ ಮುನಾಝ್ ತೋಡಾರು, ಎಂ ಎಸ್ ಎಪ್ ಕರ್ನಾಟಕ ಉಸ್ತುವಾರಿ ಅಝೀಝ್ ಕಳತ್ತೂರು,  ಮುಸ್ಲಿಂ ಯೂತ್ ಲೀಗ್ ಕಾಸರಗೋಡು ಜಿಲ್ಲಾಧ್ಯಕ್ಷ ಅಶ್ರಫ್ ಎಡನೀರ್ , ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಮಂಡಲ ಅಧ್ಯಕ್ಷ ಸಯ್ಯಿದ್ ಸೈಫುಲ್ಲಾ ತಂಙಳ್ ಉದ್ಯಾವರ,  ಮಂಜೇಶ್ವರ ತಾಲೂಕು (ಬ್ಲಾಕ್) ಪಂಚಾಯತ್  ಅಧ್ಯಕ್ಷ ಎ ಕೆ.ಎಂ ಅಶ್ರಫ್, ಎಂ ಎಸ್ ಎಪ್ ಮಂಜೇಶ್ವರ ಮಂಡಲ ಅಧ್ಯಕ್ಷ ಸಿದ್ಧೀಖ್ ಮಂಜೇಶ್ವರ , ವರ್ಕಾಡಿ ಪಂಚಾಯತ್ ಅಧ್ಯಕ್ಷ ಮಜೀದ್ ಪಾತೂರು , ಮುಹಮ್ಮದ್ ಮಾಸ್ಟರ್ ಈಶ್ವರಮಂಗಿಲ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಎಂ.ಎಸ್ಎಫ್. ಜಿಲ್ಲಾದ್ಯಕ್ಷ ಇಸ್ರಾರ್ ಗೂಡಿನಬಳಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News