ಚಂದ್ರನಗರ: ಕ್ರೆಸೆಂಟ್ ಸಿಬಿಎಸ್‌ಇ ಸ್ಕೂಲ್ ಉದ್ಘಾಟನೆ

Update: 2018-11-17 14:13 GMT

ಕಾಪು, ನ.17: ಚಂದ್ರನಗರ ಕ್ರೆಸೆಂಟ್ ಅಂತಾರಾಷ್ಟ್ರೀಯ ಸ್ಕೂಲ್‌ನ ಸಿಬಿ ಎಸ್‌ಇ ವಿಭಾಗವನ್ನು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಶನಿವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ಬಾವಾ, ಎಂ.ಎ.ಗಫೂರ್, ಶಾಲಾ ಅಧ್ಯಕ್ಷ ಶಂಶುದ್ದೀನ್ ಯೂಸುಫ್ ಸಾಹೇಬ್, ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿ ಅಧ್ಯಕ್ಷ ಕೆ.ಪಿ.ಇಬ್ರಾಹಿಂ, ಶಾಲಾ ಆಡಳಿತಾಧಿಕಾರಿ ಲೀಲು ಸನಾ, ಕಣಚೂರು ಮೋನು, ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News