ಕಾಸರಗೋಡು ನಗರ ಠಾಣೆಗೆ ತಡರಾತ್ರಿ ಮುತ್ತಿಗೆ ಹಾಕಿ ಬೆಳಗ್ಗೆ ವರೆಗೆ ಧರಣಿ ಕುಳಿತ ಬಿಜೆಪಿ ಕಾರ್ಯಕರ್ತರು

Update: 2018-11-19 04:25 GMT

ಕಾಸರಗೋಡು, ನ.19: ಶಬರಿಮಲೆ ಸನ್ನಿದಾನದಲ್ಲಿ ನಿನ್ನೆ ರಾತ್ರಿ ಪ್ರತಿಭಟನಾಕಾರರನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಬಿಜೆಪಿ ಕಾರ್ಯಕರ್ತರು ಕಾಸರಗೋಡು ನಗರ ಠಾಣಾ ಪೊಲೀಸ್ ಠಾಣೆಗೆ ತಡರಾತ್ರಿ ಮುತ್ತಿಗೆ ಹಾಕಿದರು.

ರಾತ್ರಿ ಒಂದು ಗಂಟೆಯ ಸುಮಾರಿಗೆ  50ರಷ್ಟು ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದ್ದು, ಮುಂಜಾವ ನಾಲ್ಕು ಗಂಟೆಯವರೆಗೆ ಠಾಣೆಯೆದುರು ಧರಣಿ ಕುಳಿತಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್, ರಾಜ್ಯ ಸಮಿತಿಯ ಸದಸ್ಯ ರವೀಶ ತಂತ್ರಿ ಕುಂಟಾರು, ಮುರಳಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮೊದಲಾದವರು ನೇತೃತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News