ಎಸ್ಸೆಸ್ಸೆಫ್ ಗಾಂಧಿನರ, ಭದ್ರಗಿರಿ ಶಾಖೆಗಳ ಮಹಾಸಭೆ

Update: 2018-11-19 14:27 GMT

ಬ್ರಹ್ಮಾವರ, ನ.19: ಬ್ರಹ್ಮಾವರ ಸೆಕ್ಟರ್ ವ್ಯಾಪ್ತಿಯ ಗಾಂಧಿನಗರ ಶಾಖೆಯ ಮಹಾಸಭೆ ಹಾಗೂ 2018-19 ರ ಸಾಲಿನ ನೂತನ ಸಮಿತಿ ರಚನೆ ಇತ್ತೀಚೆಗೆ ಗಾಂಧಿನಗರ ಎಸ್ಸೆಸ್ಸೆಫ್ ಕಚೇರಿಯಲ್ಲಿ ನಡೆಯಿತು.

ಭದ್ರಗಿರಿ ಮಸೀದಿ ಖತೀಬ್ ಹಾರಿಸ್ ಝುಹ್ರಿ ದುವಾ ನೆರವೇರಿಸಿದರು. ಶಾಖಾಧ್ಯಕ್ಷ ಸಿರಾಜ್ ಅಧ್ಯಕ್ಷತೆ ವಹಿಸಿದ್ದರು. ವೀಕ್ಷಕರಾಗಿ ಶಂಶುದ್ದೀನ್ ಆರ್. ಕೆ., ಸೆಕ್ಟರ್ ಚುನಾವಣಾಧಿಕಾರಿ ಇಬ್ರಾಹಿಂ ರಂಗನಕೆರೆ ಉಪಸ್ಥಿತರಿದ್ದರು. ಸೆಕ್ಟರ್ ಕಾರ್ಯದರ್ಶಿ ನಾಸೀರ್ ಸಂಘಟನೆ ಮಾಹಿತಿ ನೀಡಿದರು. ಪ್ರಧಾನ ಕಾರ್ಯ ದರ್ಶಿ ಸಮೀರ್ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಸಿನಾನ್ ಲೆಕ್ಕಪತ್ರ ಮಂಡಿಸಿದರು.

ನೂತನ ಅಧ್ಯಕ್ಷರಾಗಿ ಅಬ್ದುಲ್ ಸಿನಾನ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಂ, ಕೋಶಾಧಿಕಾರಿಯಾಗಿ ರಿಝ್ವನ್, ಉಪಾಧ್ಯಕ್ಷರಾಗಿ ಫಯಾಝ್, ರಶೀದ್, ಜೊತೆ ಕಾರ್ಯದರ್ಶಿಯಾಗಿ ಸುಹಾನ್, ರಾಹಿದ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಕೀಲ್ ಅಹಮದ್, ಗೌರವ ಸಲಹೆಗಾರ ರಾಗಿ ನಿಸಾರ್ ಅಹಮದ್ ಅವರನ್ನು ಆಯ್ಕೆ ಮಾಡಲಾಯಿತು. ಸೆಕ್ಟರ್ ಕೌನ್ಸಿಲ್ ಸದಸ್ಯರಾಗಿ ಸಿನಾನ್, ಸಿರಾಜ್, ಸಮೀರ್, ಅಶ್ರಫ್, ಅಝೀಂ, ರಿಝ್ವಿನ್, ರಶೀದ್ ಅವರನ್ನು ಆರಿಸಲಾಯಿತು. ನೂತನ ಕಾರ್ಯದರ್ಶಿ ಅಬ್ದುಲ್ ಅಝೀಂ ವಂದಿಸಿದರು.

ಭದ್ರಗಿರಿ ಶಾಖೆ: ಭದ್ರಗಿರಿ ಶಾಖೆಯ ಮಹಾ ಸಭೆ ಹಾಗೂ 2018-19ರ ಸಾಲಿನ ನೂತನ ಸಮಿತಿ ರಚನೆ ಇತ್ತೀೆಗೆ ಭದ್ರಗಿರಿ ಮಸೀದಿಯಲ್ಲಿ ಜರಗಿತು.
ಹಾರಿಸ್ ಝುಹ್ರಿ ದುವಾ ನೆರವೇರಿಸಿದರು. ಶಾಖಾಧ್ಯಕ್ಷ ನಯಾಝ್ ಅಧ್ಯಕ್ಷತೆ ವಹಿಸಿದ್ದರು. ವೀಕ್ಷಕರಾಗಿ ರಝಾಕ್ ಉಸ್ತಾದ್ ಅಂಬಾಗಿಲು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಸ್ವಾಗತಿಸಿ, ವಾರ್ಷಿಕ ವರದಿ ಹಾಗು ಲೆಕ್ಕಪತ್ರ ಮಂಡಿಸಿದರು.

ಅಧ್ಯಕ್ಷರಾಗಿ ಸೈಯದ್ ಅನೀಶ್, ಪ್ರಧಾನ ಕಾರ್ಯದರ್ಶಿಯಾಗಿ ಶಾಹಿಲ್ ಕೆ.ಟಿ., ಕೋಶಾಧಿಕಾರಿಯಾಗಿ ನಯಾಝ್, ಉಪಾಧ್ಯಕ್ಷರಾಗಿ ನಾಸೀರ್, ಯೂಸುಫ್ ಶಾಹಿಲ್, ಜೊತೆ ಕಾರ್ಯದರ್ಶಿಯಾಗಿ ಯು.ಎಂ.ಸಿನಾನ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ರಮೀಝ್, ಗೌರವ ಸಲಹೆಗಾರರಾಗಿ ಇಲ್ಯಾಸ್, ರಫೀಕ್, ಸೆಕ್ಟರ್ ಕೌನ್ಸಿಲ್ ಸದಸ್ಯರಾಗಿ ನಯಾಝ್, ಸಿನಾನ್, ನಾಸೀರ್, ಶಾಹಿಲ್ ಕೆ.ಟಿ., ಅನೀಶ್, ರಮೀಝ್ ಇವರನ್ನು ಆರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News