ಪುತ್ತೂರು: ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

Update: 2018-11-19 14:44 GMT

ಪುತ್ತೂರು, ನ. 19: ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಎಂಬಲ್ಲಿನ ಕುಮಾರಧಾರಾ ಹೊಳೆಗೆ ತನ್ನ ಗೆಳೆಯರೊಂದಿಗೆ ಸ್ನಾನಕ್ಕೆಂದು ಹೋಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಪುತ್ತೂರು ಎಪಿಎಂಸಿ ಬಳಿಯ ನಿವಾಸಿ ಸೈಫಲಿಖಾನ್ (26) ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ.

ರವಿವಾರ ಸಂಜೆ  ತನ್ನ ನಾಲ್ವರು ಸ್ನೇಹಿತರೊಂದಿಗೆ ಸೈಫಲಿ ಖಾನ್ ದಾರಂದಕುಕ್ಕು ಕಠಾರ ಬಳಿಯ ಕುಮಾರಧಾರಾ ನದಿಗೆ ಈಜಲು ತೆರಳಿದ್ದರು. ಈ ಸಂದರ್ಭ ನೀರಿಗಿಳಿದ ಅವರು  ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಮಾಹಿತಿ ಅರಿತ ಪುತ್ತೂರು ಅಗ್ನಿಶಾಮಕ ದಳ ಹಾಗೂ ಗೂಡಿನ ಬಳಿಯ ಮುಳುಗು ತಜ್ಞರು ಆಗಮಿಸಿ ರಾತ್ರಿ 12 ಗಂಟೆಯವರೆಗೆ ಹುಡುಕಾಡಿದರೂ ಸೈಫಲಿ ಅವರ ಸುಳಿವು ಲಭ್ಯವಾಗಿರಲಿಲ್ಲ. ಸೋಮವಾರ ತಣ್ಣೀರು ಬಾವಿ ಮುಳುಗು ತಜ್ಞರು ನೀರಿನ ಆಳಕ್ಕೆ ಇಳಿದು  ಹುಡುಕಾಟ ನಡೆಸಿ ನೀರಿನ ಆಳದಲ್ಲಿದ್ದ ಮೃತ ದೇಹವನ್ನು ಪತ್ತೆ ಹಚ್ಚಿ ಮೇಲಕ್ಕೆತ್ತಿದರು. 

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News