ಆಗುಂಬೆ ಘಾಟಿಯಿಂದ ಉರುಳಿದ ವಾಹನ: ಮೂವರಿಗೆ ಗಾಯ

Update: 2018-11-19 17:02 GMT

ಹೆಬ್ರಿ, ನ.19: ಆಗುಂಬೆ ಘಾಟಿಯ 4ನೇ ತಿರುವುನಲ್ಲಿ ಗೂಡ್ಸ್ ವಾಹನ ವೊಂದು ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಆಳಕ್ಕೆ ಬಿದ್ದ ಪರಿಣಾಮ ಮೂವರು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಗಾಯಗೊಂಡವರನ್ನು ಹಾವೇರಿ ಜಿಲ್ಲೆಯ ತೌಹಿದ್, ಅವರ ತಂದೆ ಅಬ್ದುಲ್ ರೋಷ್, ಸಂಬಂಧಿಕ ಫಯಾಝ್ ಎಂದು ಗುರುತಿಸಲಾಗಿದೆ. ಆಗುಂಬೆ ಮಾರ್ಗವಾಗಿ ಕುಂದಾಪುರಕ್ಕೆ ಹೋಗುತ್ತಿದ್ದ ಮೆಣಸು ಮತ್ತು ಬೆಳ್ಳುಳ್ಳಿ ತುಂಬಿದ ವಾಹನ ನ.17ರಂದು ಬೆಳಗಿನ ಜಾವ ಆಗುಂಬೆ ಘಾಟಿಯ 4ನೇ ತಿರುವುನಲ್ಲಿ ಚಾಲಕನ ನಿಯಂತ್ರಣ ತಪ್ಪಿಸುಮಾರು 100 ಅಡಿ ಆಳಕ್ಕೆ ಬಿತ್ತೆನ್ನಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News