ಅಮ್ಟೂರಿನಲ್ಲಿ ನಬಿ ದಿನಾಚರಣೆ
Update: 2018-11-20 07:54 GMT
ಮಂಗಳೂರು, ನ.20: ಮೀಲಾದ್ ದಿನದ ಪ್ರಯುಕ್ತ ಅಮ್ಟೂರು ಬದ್ರಿಯ ಜುಮಾ ಮಸೀದಿ ಮತ್ತು ನೂರುಲ್ ಇಸ್ಲಾಂ ಮದ್ರಸದ ವತಿಯಿಂದ ಸೋಮವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮತ ಪ್ರಭಾಷಣ ಜರುಗಿತು.
ಮಂಗಳವಾರ ಬೆಳಗ್ಗೆ ಕರಿಂಗಾಣ ಮದ್ರಸದಿಂದ ಮೌಲಿದ್ ಪಾರಾಯಣದ ಬಳಿಕ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ಸಲಾಂ ನೇತೃತ್ವದಲ್ಲಿ ನಡೆದ ಮೆರವಣಿಗೆ ನಡೆಯಿತು. ಖತೀಬ್ ರಝಾಕ್ ಅಮ್ಜದಿ, ಸದರ್ ಅಝೀಝ್ ಹಿಮಮಿ, ಮಹಮ್ಮದ್ ನೆತ್ತಿಕಲ್ಲು, ಸುಲೈಮಾನ್, ಕಬೀರ್ ಅಮ್ಟೂರು, ಆಸಿಫ್ ಅಮ್ಟೂರು ಮೊದಲಾದವರು ಉಪಸ್ಥಿತರಿದ್ದರು.