ಕೊಲ್ಲರಕೋಡಿ: ನ. 21ರಂದು “ಮೀಲಾದ್ ಕಾರ್ಯಕ್ರಮ”
Update: 2018-11-20 19:00 GMT
ನರಿಂಗಾನ, ನ.21: ನೂರುಲ್ ಹುದಾ ಮಸ್ಜಿದ್ ತಖ್ವಾ, ನೂರುಲ್ ಉಲೂಮ್ ಮದರಸ, ಎಸ್ಸೆಸ್ಸೆಫ್ ಕೊಲ್ಲರಕೋಡಿ ಶಾಖೆ ಇದರ ಆಶ್ರಯದಲ್ಲಿ ಮದರಸ ವಿದ್ಯಾರ್ಥಿಗಳ ಮೀಲಾದ್ ಕಾರ್ಯಕ್ರಮ ಬುಧವಾರ ಸಂಜೆ 4 ಗಂಟೆಗೆ ಕೊಲ್ಲರಕೋಡಿಯ ನೂರುಲ್ ಹುದಾ ಮಸ್ಜಿದ್ ತಖ್ವಾ ವಠಾರದಲ್ಲಿ ನಡೆಯಲಿದೆ.
ನೂರುಲ್ ಹುದಾ ಮಸ್ಜಿದ್ ತಖ್ವಾ ಅಧ್ಯಕ್ಷ ಅಬ್ದುಲ್ ರಝಾಕ್ ಪಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕರೀಂ ಫೈಝಿ ಮಂಜನಾಡಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಮಂಜನಾಡಿ ಮುದರ್ರಿಸ್ ಪಿ.ಎ ಅಹ್ಮದ್ ಬಾಖವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.