ನ.23: ಮಾರ್ನಮಿಕಟ್ಟೆಯಲ್ಲಿ ಸೀರತ್ ಸಾರ್ವಜನಿಕ ಸಭೆ

Update: 2018-11-21 06:11 GMT

ಮಂಗಳೂರು, ನ.21: ಪ್ರವಾದಿ ಮುಹಮ್ಮದ್(ಸ) ಶ್ರೇಷ್ಠ ಮಾರ್ಗದರ್ಶಕ ಸೀರತ್ ಅಭಿಯಾನ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಜಪ್ಪು-ಬೋಳಾರ ವರ್ತುಲದ ವತಿಯಿಂದ ನ.23ರಂದು ಸಂಜೆ 6:30ಕ್ಕೆ ಮಾರ್ನಮಿಕಟ್ಟೆ ನಾಯಕ್ಸ್ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕುದ್ರೋಳಿ ಜಾಮಿಯಾ ಮಸೀದಿ ಖತೀಬ್ ಮೌಲನಾ ಮುಫ್ತಿ ಅಬ್ದುಲ್ ಮನ್ನಾನ್, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿಯ ಸದಸ್ಯ ಅಕ್ಬರಲಿ ಉಡುಪಿ, ಎ.ಆರ್.ಕೆ. ಶಾಲೆಯ ಆಧ್ಯಾಪಕ ಅಬ್ದುಲ್ಲತೀಫ್ ಆಲಿಯಾ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಮೌಲನಾ ಯಹ್ಯಾ ತಂಙಳ್ ಮದನಿ ವಹಿಸುವರು ಎಂದು ಕಾರ್ಯಕ್ರಮ ಸಂಚಾಲಕ ಮುಹಮ್ಮದ್ ಮುಹ್ಸಿನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News