'ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್‌'ನಿಂದ ಸ್ವ ಉದ್ಯೋಗ ಪ್ರೋತ್ಸಾಹ ಯೋಜನೆ: ಅರ್ಜಿ ಆಹ್ವಾನ

Update: 2018-11-21 10:31 GMT

ಮಂಗಳೂರು, ನ.21: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ(ಬಿಸಿಸಿಐ) ವತಿಯಿಂದ ದಕ್ಷಿಣ ಕನ್ನಡದ ಬ್ಯಾರಿ ಉದ್ಯಮಿಗಳಿಗೆ ಸ್ವ ಉದ್ಯೋಗದ ಪ್ರೋತ್ಸಾಹದ ಯೋಜನೆಯನ್ನು ಪ್ರಕಟಿಸಿದೆ. 

ಈ ಯೋಜನೆಯ ಫಲಾನುಭವಿಗಳಿಗೆ ಗರಿಷ್ಠ 10 ಲಕ್ಷ ರೂ. ಸರಳ ಹೂಡಿಕೆಯನ್ನು ನಿಬಂಧನೆಗಳೊಂದಿಗೆ ನೀಡಲಾಗುವುದು. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಫಾರಂಗಾಗಿ ಮಂಗಳೂರಿನ ಕಂಕನಾಡಿಯ ವಿಶ್ವಾಸ್ ಕ್ರೌನ್ ಕಾಂಪ್ಲೆಕ್ಸ್‌ನಲ್ಲಿರುವ ಬಿಸಿಸಿಐ ಆಡಳಿತ ಕಚೇರಿಯನ್ನು ಸಂಪರ್ಕಿಸಬಹುದು.

ಆಸಕ್ತ ಅರ್ಹರು ಅರ್ಜಿಯನ್ನು ಡಿಸೆಂಬರ್ 5ರೊಳಗೆ ಸಲ್ಲಿಸುವಂತೆ ಸಂಸ್ಥೆಯ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News