ಬಂಟ್ವಾಳ: ನೇಣು ಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆ

Update: 2018-11-22 10:47 GMT

ಬಂಟ್ವಾಳ, ನ. 22: ಪತಿ, ಪತ್ನಿ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿನಾಲ್ಕೂರು ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.‌

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಪತ್ತನಾಡಿ ಎಂಬಲ್ಲಿನ ನಿವಾಸಿ ಪ್ರೇಮನಾಥ ಪೂಜಾರಿ (67) ಮತ್ತು ಅವರ ಪತ್ನಿ ಚಂದ್ರಾವತಿ (60)  ಆತ್ಮಹತ್ಯೆ ಮಾಡಿಕೊಂಡು ದಂಪತಿ. ‌

ಪ್ರೇಮನಾಥ ಪೂಜಾರಿ ಅವರು ಬಾವಿಯ ನೀರು  ಸೇದುವ  ಮರದ ಕಂಬಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದರೆ, ಇವರ ಪತ್ನಿ ಚಂದ್ರಾವತಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 

ಘಟನೆಗೆ ಸ್ಪಷ್ಟ ವಾದ ಕಾರಣ ತಿಳಿದು ಬಂದಿಲ್ಲ. ದಂಪತಿಗೆ ಮೂವರು ಪುತ್ರಿಯರು ಹಾಗೂ ಓರ್ವ  ಪುತ್ರನಿದ್ದು, ಆತ ಇಲ್ಲೇ ಹತ್ತಿರದಲ್ಲಿ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದಾನೆ. ಚಂದ್ರಾವತಿ ಅವರಿಗೆ ಹಿಂದಿನಿಂದಲೂ ವಿಪರೀತ ಕುಡಿತದ ಚಟವಿದ್ದು ಗಂಡ ಸಹಿತ ಮನೆಯವರ ವಿರೋಧವಿತ್ತು ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಗ್ರಾಮಾಂತರ ಎಸ್ಸೈ ಪ್ರಸನ್ನ, ಸಿಬ್ಬಂದಿ ಸುರೇಶ್, ಜಯರಾಮ, ಜನಾರ್ದನ ಮನೋಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News