ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಶಿವಸೇನೆಗೆ ಯಾವುದೇ ಪಾತ್ರವಿಲ್ಲ
Update: 2018-11-25 13:04 IST
ಅಯೋಧ್ಯೆ, ನ.25: ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಶಿವಸೇನೆಗೆ ಯಾವುದೇ ಪಾತ್ರವಿಲ್ಲ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣದ ದಿನಾಂಕ ಘೋಷಿಸುವಂತೆ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ ನಂತರ ಮೌರ್ಯರ ಈ ಹೇಳಿಕೆ ಹೊರಬಿದ್ದಿದೆ. “ಬಾಳಾಸಾಹೇಬ್ ಠಾಕ್ರೆ ಬದುಕಿರುತ್ತಿದ್ದರೆ, ಉದ್ಧವ್ ಏನು ಮಾಡುತ್ತಿದ್ದಾರೋ ಅದನ್ನು ತಡೆಯುತ್ತಿದ್ದರು” ಎಂದವರು ಹೇಳಿದರು.