ಶ್ರೀನಗರದಲ್ಲಿ ಜೆಡಿಯು ನಾಯಕನಿದ್ದ ವಾಹನದ ಮೇಲೆ ಗುಂಡಿನ ದಾಳಿ

Update: 2018-11-28 16:58 GMT

ಶ್ರೀನಗರ,ನ.28: ಬುಧವಾರ ಇಲ್ಲಿಯ ಲಾಲ್ ಬಝಾರ್ ಪ್ರದೇಶದಲ್ಲಿ ಜೆಡಿಯು ನಾಯಕರೋರ್ವರಿದ್ದ ವಾಹನದ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು,ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.

ಸ್ಥಳೀಯ ಜೆಡಿಯು ನಾಯಕ ಸಾಜದ್ ಮಿರ್ಝಾ ಅವರು ಮದೀನ್ ಸಾಹಿಬ್ ಪ್ರದೇಶದಲ್ಲಿರುವ ತನ್ನ ತಂದೆಯ ನಿವಾಸಕ್ಕೆ ತೆರಳುತ್ತಿದ್ದಾಗ ಕೆಲವು ಅಪರಿಚಿತ ಪಿಸ್ತೂಲುಧಾರಿಗಳು ಅವರ ವಾಹನದ ಮೇಲೆ ಗುಂಡುಗಳನ್ನು ಹಾರಿಸಿದ್ದರು. ಮಿರ್ಝಾರ ಅಂಗರಕ್ಷಕರು ಪ್ರತಿದಾಳಿ ನಡೆಸಿದಾಗ ದಾಳಿಕೋರರು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News