ಬೆಳ್ತಂಗಡಿ: ಮೀಲಾದ್ ರ್ಯಾಲಿ, ಶರೀಅತ್ ಸಂರಕ್ಷಣಾ ಸಮ್ಮೇಳನದ ಪ್ರಚಾರ ಸಭೆ

Update: 2018-12-06 15:07 GMT

ಬೆಳ್ತಂಗಡಿ, ಡಿ. 6: ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಮತ್ತು ಬೆಳ್ತಂಗಡಿ ರೇಂಜ್ ಜಂಟಿ ಆಶ್ರಯದಲ್ಲಿ ಕಾರ್ ವಾನೆ ಮದೀನ ಮೀಲಾದ್ ರ್ಯಾಲಿ ಮತ್ತು ಶರೀಅತ್ ಸಂರಕ್ಷಣಾ ಸಮ್ಮೇಳನದ ಪ್ರಚಾರ ಸಭೆ ಬೆಳ್ತಂಗಡಿಯಲ್ಲಿ ನಡೆಯಿತು.

ಮೀಲಾದ್ ರ್ಯಾಲಿಗೆ ಅಕ್ರಂ ಅಲಿ ತಂಙಳ್ ಸಮಸ್ತ ಧ್ವಜ ಸ್ವಾಗತ ಸಮಿತಿ ಅಧ್ಯಕ್ಷ ಬಶೀರ್ ಬಳ್ಳಮಂಜ ಅವರಿಗೆ ನೀಡುವ ಮೂಲಕ ಚಾಲನೆ ನೀಡಿದರು. ಪ್ರವಾದಿ ಕೀರ್ತನೆಗಳೊಂದಿಗೆ ಸಾಗಿದ ರ್ಯಾಲಿಯ ಸಮಾರೋಪ ಸಮಾರಂಭವು ಅಂಬೇಡ್ಕರ್ ಭವನದ ಹತ್ತಿರ ನಡೆಯಿತು.

ಸಭೆಯಲ್ಲಿ ವಲಯ ಅಧ್ಯಕ್ಷ  ನಝೀರ್ ಅಝ್ಹರಿ ಅಧ್ಯಕ್ಷತೆ ವಹಿಸಿದರು. ಬೆಳ್ತಂಗಡಿ ಉಲಮಾ ಒಕ್ಕೂಟದ ಅಧ್ಯಕ್ಷರಾದ ಐ ಕೆ ಮೂಸಾ ದಾರಿಮಿ ಉದ್ಘಾಟಿಸಿದರು. ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುವಾ ಮಾಡಿದರು. ಜಿಲ್ಲಾ ಸಮಿತಿ ಸದಸ್ಯ ಇಕ್ಬಾಲ್ ಬಾಳಿಲ ಮುಖ್ಯ ಭಾಷಣಗೈದರು. ಅಕ್ರಂ ಅಲಿ ತಂಙಳ್, ಬೆಳ್ತಂಗಡಿ ರೇಂಜ್ ಅಧ್ಯಕ್ಷ ಅಶ್ರಫ್ ಫೈಝಿ, ವಲಯ ಕೋಶಾಧಿಕಾರಿ ಶಂಸುದ್ದೀನ್ ದಾರಿಮಿ, ಜಿಲ್ಲಾ ಸದಸ್ಯ ಹನೀಫ್ ದೂಮಳಿಕೆ, ಬೆಳ್ತಂಗಡಿ ಖತೀಬ್ ಹನೀಫ್ ದಾರಿಮಿ, ರಝಾಕ್ ಕನ್ನಡಿಕಟ್ಟೆ, ಬಶೀರ್ ಬಳ್ಳಮಂಜ ,ಶರೀಫ್ ದೂಮಳಿಕೆ, ಬದ್ರುಧ್ಧೀನ್ ಫೈಝಿ, ಅಫ್ಝಲ್ ಹುದವಿ, ಸಮೀರ್ ಮುಸ್ಲಿಯಾರ್, ಸಾದಿಕ್ ಕಟ್ಟೆ, ಮುಹಮ್ಮದ್ ಕುದ್ರಡ್ಕ, ಸಮದ್ ಮಾಸ್ಟರ್, ರಫೀಖ್ ಮಂಗಳ, ಬಶೀರ್ ವಗ್ಗ, ರಝಾಕ್ ಮುಸ್ಲಿಯಾರ್, ಶಕೀಲ್ ಅರೆಕ್ಕಲ್, ಝುಬೈರ್ ಬಂಡಸಾಲೆ, ಅಬ್ಬಾಸ್ ಚಾರ್ಮಾಡಿ, ಮಜೀದ್ ದಾರಿಮಿ, ಉಸ್ಮಾನ್ ಸವಣಾಲು, ಸಿರಾಜ್ ಅಝ್ಹರಿ  ಸೊಮಂತಡ್ಕ, ಅಲಿ ಫೈಝಿ ಪಾಂಡವರಕಲ್ಲು ಮುಂತಾದವರು ಉಪಸ್ಥಿತರಿದ್ದರು.

ವಲಯ ಕಾರ್ಯದರ್ಶಿ ರಿಯಾಝ್ ಫೈಝಿ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಶರೀಫ್ ಕಕ್ಕಿಂಜೆ ವಂದಿಸಿದರು. ಸಿರಾಜ್ ಚಿಲಿಂಬಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News