ಬೆಂಗರೆ ಎಸ್‌ಕೆಎಸ್‌ಬಿವಿಯಿಂದ ಶರೀಅತ್ ಸಮ್ಮೇಳನದ ಪ್ರಚಾರ

Update: 2018-12-07 12:04 GMT

ಮಂಗಳೂರು, ಡಿ.7: ನಗರದ ನೆಹರೂ ಮೈದಾನದಲ್ಲಿ ನಡೆಯುವ ಡಿಸೆಂಬರ್ 9ರಂದು ನಡೆಯಲಿರುವ ಸಮಸ್ತ ಶರೀಅತ್ ಸಮ್ಮೇಳನ ಹಾಗೂ ರ್ಯಾಲಿಯ ಪ್ರಚಾರವು ಬೆಂಗರೆ ಅಲ್ ಮದ್ರಸತುದ್ದೀನಿಯ್ಯ ಎಸ್‌ಕೆಎಸ್‌ಬಿವಿ ಹಾಗೂ ಮುಅಲ್ಲಿಂ ಸ್ಟಾಫ್ ಕೌನ್ಸಿಲ್‌ನ ಜಂಟಿ ಆಶ್ರಯದಲ್ಲಿ ಶುಕ್ರವಾರ ಬೆಳಗ್ಗೆ ಬೆಂಗರೆ ಮುಹ್ಯಿದ್ದೀನ್ ಜುಮಾ ಮಸೀದಿಯ ಮುಂಭಾಗದಲ್ಲಿ ಸಮ್ಮೇಳನದ ಪೋಸ್ಟರ್ ಹಾಗೂ ಬೆಂಗರೆ ಎಸ್‌ಕೆಎಸ್‌ಬಿವಿ ಹೊರತಂದ ‘ಡಿಸೆಂಬರ್ 9ಕ್ಕೆ ನಾವು ಶರೀಅತ್ ಸಮ್ಮೇಳನಕ್ಕೆ’ ಎಂಬ ಪೋಸ್ಟರನ್ನು ಪ್ರದರ್ಶಿಸಿ ಪ್ರಚಾರ ಪಡಿಸಿದರು.

ಸಮಾರಂಭದಲ್ಲಿ ಬೆಂಗರೆ ಖತೀಬ್ ಶರೀಫ್ ದಾರಿಮಿ, ಸದರ್ ಉಸ್ತಾದ್ ಉಮರ್ ದಾರಿಮಿ ಪಟ್ಟೋರಿ, ಎ.ಎಂ.ಡಿ ಆಡಳಿತ ಸಮಿತಿಯ ಉಪಾಧ್ಯಕ್ಷ ಸಿ.ಪಿ. ಮುಸ್ತಫಾ, ಉಸ್ತುವಾರಿ ಕುಂಞಾಲಿ, ಇಸ್ಮಾಯೀಲ್, ಮದ್ರಸ ಅಧ್ಯಾಪಕ ಅಬ್ದುಲ್ ಜಲೀಲ್ ಮೌಲವಿ, ಮುಹ್ಯುದ್ದೀನ್ ಮೌಲವಿ, ಮುಹಮ್ಮದ್ ರಫೀಖ್ ಅಜ್ಜಾವರ, ಶಾಹುಲ್ ಹಮೀದ್ ಮೌಲವಿ ಐವರ್ನಾಡು, ನವಾಝ್ ಅಝ್‌ಹರಿ, ಹಾರಿಸ್ ಯಮಾನಿ, ಸಲೀಂ ಯಮಾನಿ, ಎ.ಕೆ. ಮುಹಮ್ಮದ್ ಮುಸ್ಲಿಯಾರ್ ಅರ್ಕಾಣ, ಶಫಿಯುಲ್ಲ ದಾರಿಮಿ ಕಡಬ, ಅಯ್ಯೂಬ್ ಬೆಂಗರೆ, ಸಲ್ಮಾನುಲ್ ಫಾರಿಸ್ ಹಾಗೂ ಎಸ್‌ಕೆಎಸ್‌ಬಿವಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News