ಬೆಳಪು ನಡಿಮನೆ ರವಿರಾಜ ರಾವ್ ನಿಧನ

Update: 2018-12-11 17:20 GMT

ಪಡುಬಿದ್ರಿ, ಡಿ. 11: ಬೆಳಪು ಗ್ರಾಮದ ನಡಿಮನೆ ದಿ.ಮೋಹನ ರಾವ್‍ ಅವರ ಪುತ್ರ ಬೆಳಪು ನಡಿಮನೆ ರವಿರಾಜ ರಾವ್(45) ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಾಂದೇಡ್‍ನ ಸ್ವಗೃಹದಲ್ಲಿ ನಿಧನರಾದರು.

ಮಹಾರಾಷ್ಟ್ರದ ನಾಂದೇಡ್‍ನ ಹೋಟೆಲ್ "ತಾಜ್ ಪಾಟೀಲ್" ಮಾಲೀಕರಾಗಿದ್ದ ಇವರು, ಎಂದಿನಂತೆ ಮಂಗಳವಾರ ಮುಂಜಾನೆ ಜಿಮ್‍ಗೆ ತೆರಳಿದ್ದರು. ವಾಪಾಸು ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿರುವ ಸಂದರ್ಭ ತೀವ್ರ ಹೃದಯಾಘಾತವಾಗಿತ್ತು.

ಕಳೆದ 15 ವರ್ಷಗಳಿಂದ ಅವರು ನಾಂದೇಡ್‍ನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ಅವರಿಗೆ ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರಿ, ಪತ್ರಕರ್ತ ವಾದಿರಾಜ ರಾವ್ ನಡಿಮನೆ ಸಹಿತ 4 ಸಹೋದರರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಹೈದರಾಬಾದ್‍ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News