ಒತ್ತಡದಲ್ಲಿ ಸಾಧನೆ ಅಸಾಧ್ಯ: ಗಣೇಶ್ ಕುಮಾರ್ ಮಟ್ಟು

Update: 2018-12-12 14:36 GMT

ಕಾಪು, ಡಿ.12: ಮಕ್ಕಳಿಗೆ ತಮ್ಮ ಇಚ್ಛಾ ಕ್ಷೇತ್ರವನ್ನು ಆರಿಸಿಕೊಳ್ಳುವ ಅವಕಾಶ ವನ್ನು ಹೆತ್ತವರು ನೀಡಬೇಕು. ಮಕ್ಕಳ ಮೇಲೆ ತಮ್ಮ ಅಭಿಪ್ರಾಯವನ್ನು ಹೇರ ಬಾರದು. ಒತ್ತಡದಲ್ಲಿ ಸಾಧನೆ ಸಾಧ್ಯವಿಲ್ಲ ಎಂದು ಕೋಟೆ ಗ್ರಾಪಂ ಉಪಾಧ್ಯಕ್ಷ ನ್ಯಾಯವಾದಿ ಗಣೇಶ್ ಕುಮಾರ್ ಮಟ್ಟು ಹೇಳಿದ್ದಾರೆ.

ಕಟಪಾಡಿ ಎಸ್.ವಿ.ಕೆ/ಎಸ್.ವಿ.ಎಸ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಚಿತ್ರಕಲೆ, ಕರಕುಶಲ ವಸ್ತುಗಳು, ಆವೆ ಮಣ್ಣಿನ ಮಾದರಿಗಳು ಮತ್ತು ವಿಜ್ಞಾನದ ಮಾದರಿಗಳ ಪ್ರದರ್ಶನವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತ ನಾಡುತಿದ್ದರು.

ಆಡಳಿತ ಮಂಡಳಿಯ ಸದಸ್ಯ ನಿತ್ಯಾನಂದ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಟಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ವಿನಯ ಬಲ್ಲಾಳ್ ಮಾತನಾಡಿದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ನವೀನ್‌ಚಂದ್ರ ಪಾಲನ್, ಶಾಲಾ ಮುಖ್ಯೋಪಾಧ್ಯಾಯ ದೇವೇಂದ್ರ ನಾಯಕ್ ಉಪಸ್ಥಿತರಿದ್ದರು.

ಸೋನಲ್ ಸ್ವಾಗತಿಸಿದರು. ಸ್ಪೂರ್ತಿ ಮತ್ತು ಜ್ಞಾನೇಶ್ ಪರಿಚಯಿಸಿದರು. ಶಾಲಾ ನಾಯಕಿ ಪಲ್ಲವಿ ಕೊಡಗು ವಂದಿಸಿದರು. ದಿವ್ಯ ಹಾಗೂ ಅಸ್ವಿಟಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News