ಉಡುಪಿ; ಭಕ್ತಿಗೀತೆ ಧ್ವನಿ ಸುರುಳಿ ಬಿಡುಗಡೆ
Update: 2018-12-14 13:01 GMT
ಉಡುಪಿ, ಡಿ.14: ಹೊಳೆಬಾಗಿಲು ಶ್ರೀಸಿದ್ಧಿವಿನಾಯಕ ಮೂಡುಗಣಪತಿ ದೇವಸ್ಥಾನದ ಭಕ್ತಿಗೀತೆ ಧ್ವನಿ ಸುರುಳಿಯನ್ನು ನಿರ್ಮಾಪಕ ಚಂದ್ರಶೇಖರ್ ಕಾರಂತ ಗುರುವಾರ ಬಿಡುಗಡೆಗೊಳಿಸಿದರು.
ಕಲಾವಿದ ಪ್ರಭಾಕರ್ ಕುಂದರ್, ಗಾಯಕರಾದ ಕೃಷ್ಣ, ಪ್ರಸಾದ್ ಮೊಗೆಬೆಟ್ಟು, ಡಾ.ಸತೀಶ್ ಪೂಜಾರಿ, ಗಾಯಕಿ ಜ್ಯೋತಿ, ಕಾರ್ತಿಕ್, ದೇವಸ್ಥಾನದ ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್, ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ರಾದ ಮೋಹನ್ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.