ಪ್ರೊ ಕಬಡ್ಡಿ: ಕನ್ನಡಿಗ ಪ್ರಶಾಂತ್ ರೈ ಸಾಹಸ

Update: 2018-12-15 18:16 GMT

ಪಂಚಕುಲಾ, ಡಿ.15: ಯುಪಿ ಯೋಧಾ ಹಾಗೂ ತಮಿಳ್ ತಲೈವಾಸ್ ಮಧ್ಯೆ ಇಲ್ಲಿ ತಾವ್ ದೇವಿಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ಶನಿವಾರನಡೆದ ಪ್ರೊ ಕಬಡ್ಡಿ ಟೂರ್ನಿಯ ಪಂದ್ಯ ರೋಚಕ ಟೈನಲ್ಲಿ ಅಂತ್ಯ ಕಂಡಿದೆ. ಯುಪಿ ಪರ ಕನ್ನಡಿಗ ಪ್ರಶಾಂತ್‌ಕುಮಾರ್ ರೈ ಅತ್ಯಧಿಕ 12 ಅಂಕ ಗಳಿಸಿ ಮಿಂಚಿದರು. ನಿತೇಶ್ ಕುಮಾರ್ 5 ಅಂಕ ಗಳಿಸುವ ಮೂಲಕ ರೈಗೆ ಉತ್ತಮ ಸಾಥ್ ನೀಡಿದರು.ತಮಿಳ್ ತಲೈವಾಸ್ ಪರ ಅಜಯ್ ಠಾಕೂರ್ ಅತ್ಯಧಿಕ 6, ಅಮಿತ್ ಹೂಡ 5 ಹಾಗೂ ಅತುಲ್ ಎಂ.ಎಸ್, ಡಿ.ಪ್ರದೀಪ್ ತಲಾ 3 ಅಂಕ ಗಳಿಸುವ ಮೂಲಕ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದು ಟೈ : ಇದೇ ಮೈದಾನದಲ್ಲಿ ನಡೆದ ಯು ಮುಂಬಾ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್‌ಗಳ ಮಧ್ಯದ ಪಂದ್ಯವು 35-35 ಅಂಕಗಳಿಂದ ಟೈನಲ್ಲಿ ಕೊನೆಗೊಂಡಿತು. ಯು ಮುಂಬಾ ಪರ ಸಿದ್ದಾರ್ಥ್ ದೇಸಾಯಿ ಅತ್ಯಧಿಕ 14, ರೋಹಿತ್ ಬಲಿಯಾನ್ 7 ಹಾಗೂ ರೋಹಿತ್ ರಾಣಾ 5 ಅಂಕಗಳನ್ನು ಗಳಿಸಿದರು. ಜೈಪುರ ಪರ ದೀಪಕ್ ಹೂಡ ಅತ್ಯಧಿಕ 13 ಹಾಗೂ ಅಮಿತ್‌ಕುಮಾರ್ 6 ಅಂಕ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News