ಡಿ. 17: ತೊಕ್ಕೋಟ್ಟಿನಲ್ಲಿ 'ಪ್ರವಾದಿ ಅಭಿಯಾನ ಕಾರ್ಯಕ್ರಮ'

Update: 2018-12-16 05:13 GMT

ಮಂಗಳೂರು, ಡಿ. 16: ಯುನಿವೆಫ್ ಕರ್ನಾಟಕ  ನ. 30 ರಿಂದ 2019ರ ಫೆ. 1 ರ ತನಕ “ಮಾನವ ಸಮಾಜ ಮತ್ತು ಆಧ್ಯಾತ್ಮಿಕತೆ- ಪ್ರವಾದಿ ಮುಹಮ್ಮದ್ (ಸ) ರ ದೃಷ್ಟಿಯಲ್ಲಿ” ಎಂಬ ವಿಷಯದಲ್ಲಿ ಹಮ್ಮಿಕೊಂಡಿರುವ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಪ್ರವಾದಿ(ಸ)ರ ಸಂದೇಶ ಪ್ರಚಾರ ಅಭಿಯಾನದ  ಸಾರ್ವಜನಿಕ ಕಾರ್ಯಕ್ರಮವು ಡಿ.17ರಂದು ಸಂಜೆ 7 ಗಂಟೆಗೆ ತೊಕ್ಕೋಟ್ಟಿನ ಅಂಬೇಡ್ಕರ್ ಮೈದಾನದಲ್ಲಿ ನಡೆಯಲಿದೆ. 

ಮುಖ್ಯ ಅತಿಥಿಯಾಗಿ ತೊಕ್ಕೋಟ್ಟಿನ ಸಂತ ಸೆಬಾಸ್ಟಿಯನ್ ಕಾಲೇಜಿನ ಉಪನ್ಯಾಸಕ ಮತ್ತು ಬರಹಗಾರ ಶ್ರೀ ಅರುಣ್ ಉಳ್ಳಾಲ್ ಭಾಗವಹಿಸಲಿದ್ದಾರೆ.  ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಕನ್ನಡ ಭಾಷೆಯಲ್ಲಿ ಮುಖ್ಯ ಭಾಷಣ ಮಾಡಲಿರುವರು ಎಂದು ಅಭಿಯಾನ ಸಂಚಾಲಕ ಅಬ್ದುಲ್ಲಾ ಪಾರೆ ತಿಳಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News