ರಾಷ್ಟ್ರೀಯ ಸಮಗ್ರತೆಗಾಗಿ ಪಟೇಲ್ ಪ್ರಶಸ್ತಿ ಸ್ಥಾಪನೆ
Update: 2018-12-23 21:42 IST
ಹೊಸದಿಲ್ಲಿ,ಡಿ.23: ರಾಷ್ಟ್ರೀಯ ಸಮಗ್ರತೆಯನ್ನು ಉತ್ತೇಜಿಸುವಲ್ಲಿ ಅಸಾಧಾರಣ ಪ್ರಯತ್ನಗಳಿಗಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರಿನಲ್ಲಿ ನೂತನ ಪ್ರಶಸ್ತಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಜರಾತಿನ ಕೇವಡಿಯಾದಲ್ಲಿ ನಡೆದ ಡಿಜಿಪಿಗಳು/ಐಜಿಪಿಗಳ ಸಮಾವೇಶದಲ್ಲಿ ಪ್ರಕಟಿಸಿದ್ದಾರೆ.
ಈ ಬಗ್ಗೆ ರವಿವಾರ ಟ್ವೀಟಿಸಿರುವ ಅವರು,ಪಟೇಲ್ ಅವರು ಭಾರತವನ್ನು ಒಗ್ಗೂಡಿಸಲು ತನ್ನ ಜೀವನವನ್ನು ಅರ್ಪಿಸಿದ್ದರು. ಸರ್ದಾರ್ ಪಟೇಲ್ ರಾಷ್ಟ್ರೀಯ ಸಮಗ್ರತೆ ಪ್ರಶಸ್ತಿಯು ಅವರಿಗೆ ಸೂಕ್ತ ಗೌರವವಾಗಿದೆ ಮತ್ತು ಭಾರತದ ಏಕತೆ ಮತ್ತು ರಾಷ್ಟ್ರೀಯ ಸಮಗ್ರತೆಗಾಗಿ ಶ್ರಮಿಸಲು ಜನರಿಗೆ ಸ್ಫೂರ್ತಿಯನ್ನು ನೀಡಲಿದೆ ಎಂದು ಹೇಳಿದ್ದಾರೆ.