ಕೃಷ್ಣಾಪುರ: ಬದ್ರುಲ್ ಹುದಾ ಎಸೋಸಿಯೇಶನ್ ವತಿಯಿಂದ ಉಚಿತ ಮುಂಜಿ ಕಾರ್ಯಕ್ರಮ
ಕೃಷ್ಣಾಪುರ, ಡಿ. 25: ಬದ್ರಿಯಾ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ ಇದರ ಅಧೀನಕ್ಕೆ ಒಳಪಟ್ಟ ಬದ್ರುಲ್ ಹುದಾ ಎಸೋಸಿಯೇಶನ್ 7ನೇ ಬ್ಲಾಕ್ ಕೃಷ್ಣಾಪುರ 44ನೇ ವಾರ್ಷಿಕೋತ್ಸವದ ಅಂಗವಾಗಿ ಬಡ ಕುಟುಂಬಗಳ ಮಕ್ಕಳ ಉಚಿತ ಮುಂಜಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಡಾ. ಮುಹಿಯುದ್ದೀನ್ ಸಚ್ಚರಿಪೇಟೆ, ಸಂಸ್ಥೆಯ ಅಧ್ಯಕ್ಷ ಇಫ್ತಿಕಾರ್ ಅಹ್ಮದ್, ಉಪಾಧ್ಯಕ್ಷ ಅಶ್ರಫ್ ಸಫಾ, ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್, ಕೋಶಾಧಿಕಾರಿ ಬಶೀರ್ ಬಿ.ಕೆ., ಲೆಕ್ಕ ಪರಿಶೋಧಕ ಬಶೀರ್ ಅಹ್ಮದ್, ಗೌರವಾಧ್ಯಕ್ಷ ಅಬೂಬಕರ್ ಕನ್ನಡನಾಡು, ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಮಾಜಿ ಅಧ್ಯಕ್ಷರುಗಳಾದ ಅಬೂಬಕರ್ ಬದ್ರುಲ್ ಹುದಾ, ಮುಹಮ್ಮದಾಲಿ ಬದ್ರುಲ್ ಹುದಾ, ಬಿ.ಎಚ್. ಮುಹಿಯುದ್ದೀನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಹೈದರಾಲಿ, ರಫೀಕ್ ಹಿಲ್ ಸಯ್ಡ್, ಮುಸ್ತಫಾ, ನಿಸಾರ್, ಫಾರೂಕ್ ಉನ್ನಿಯಾಕ, ಹಸನಬ್ಬ, ಹುಸೈನಾಕ, ಟಿಎಂ ಅಬೂಬಕರ್, ವೈ ಉಮರಬ್ಬ, ಹನೀಫ್ ಕೆಎಫ್ ಸಿ , ಯಾಸೀನ್ ಈದ್ಗಾ, ಸಲಾಂ ಈದ್ಗಾ, ಉಮರಬ್ಬ ಈದ್ಗ, ಮನ್ಸೂರ್ ಈದ್ಗಾ ಹಾಗೂ ಇತರರು ಉಪಸ್ಥಿತರಿದ್ದರು.