ಪತ್ನಿಯೊಂದಿಗೆ ಜಗಳ: ಕಟ್ಟಡದಿಂದ ಹಾರಿ ವೈದ್ಯ ಆತ್ಮಹತ್ಯೆ

Update: 2018-12-27 15:44 GMT

ಹೊಸದಿಲ್ಲಿ, ಡಿ. 27: ದಕ್ಷಿಣ ದಿಲ್ಲಿಯ ಹೌಝ್ ಕಾಸ್‌ನಲ್ಲಿ ಎಐಐಎಂಎಸ್‌ನ 34 ವರ್ಷದ ವೈದ್ಯರೊಬ್ಬರು ಪತ್ನಿಯೊಂದಿಗೆ ಜಗಳವಾಡಿ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ವೈದ್ಯರನ್ನು ರಾಜಸ್ಥಾನದ ನಾಗೌರ್ ಮೂಲದ ಮನೀಶ್ ಶರ್ಮಾ ಎಂದು ಗುರುತಿಸಲಾಗಿದೆ.

ಈ ಘಟನೆ ಬಗ್ಗೆ ಹೌಝ್ ಖಾಸ್ ಪೊಲೀಸ್ ಠಾಣೆಗೆ ಗೌತಮ್‌ನಗರ್‌ನಿಂದ ಅಪರಾಹ್ನ 11.29ಕ್ಕೆ ಮಾಹಿತಿ ನೀಡಲಾಗಿತ್ತು. ಎಐಐಎಂಎಸ್‌ನ ನಿವಾಸಿ ವೈದ್ಯ ಹಾಗೂ ಎಂಡಿಗೆ ಸಿದ್ದತೆ ನಡೆಸುತ್ತಿದ್ದ ಡಾ. ಶರ್ಮಾ ಅವರು ಪಿಜಿಐ ಚಂಡಿಗಢದ ಹಿರಿಯ ನಿವಾಸಿ ವೈದ್ಯರಾಗಿದ್ದ ತೃಪ್ತಿ ಚೌಧರಿ ಅವರನ್ನು 6 ತಿಂಗಳ ಹಿಂದೆ ವಿವಾಹವಾಗಿದ್ದರು. ಪತ್ನಿಯೊಂದಿಗೆ ನಡೆದ ಕ್ಷುಲ್ಲಕ ಜಗಳದ ಹಿನ್ನೆಲೆಯಲ್ಲಿ ಶರ್ಮಾ ಅವರು ಕೆಲವು ಮಾತ್ರೆಗಳನ್ನು ಕುಡಿದು ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News