ಬೇಕಲ ಠಾಣೆ ಎಎಸ್ಸೈಗೆ ತಂಡದಿಂದ ಇರಿತ

Update: 2019-01-01 05:04 GMT

ಕಾಸರಗೋಡು, ಜ. 1: ಹೊಸ ವರ್ಷಾಚರಣೆ ಸಂದರ್ಭ ಬೇಕಲ ಠಾಣೆಯ ಎಎಸ್ಸೈ ಅವರಿಗೆ ತಂಡವೊಂದು ಇರಿದು ಗಾಯಗೊಳಿಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.

ಬೇಕಲ ಠಾಣೆಯ ಎಎಸ್ಸೈ ಜಯರಾಜ್ ಇರಿತಕ್ಕೊಳಗಾದವರು ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಜಯರಾಜ್ ರನ್ನು  ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಸ ವರ್ಷಾಚರಣೆ ಸಂದರ್ಭ ರಸ್ತೆ ತಡೆ ನಡೆಸಿದ ಗುಂಪನ್ನು ಚದುರಿಸಲೆತ್ನಿಸಿದಾಗ ತಂಡ ಇರಿದು ಗಾಯಗೊಳಿಸಿದೆ ಎಂದು  ಬೇಕಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News