ಚಿಟ್ ಫಂಡ್ ಹಗರಣ ಆರೋಪ: ಪತ್ರಿಕಾ ಸಂಪಾದಕನ ಬಂಧನಕ್ಕೆ ಎಡಿಟರ್ಸ್ ಗಿಲ್ಡ್‌ನ ಕಳವಳ

Update: 2019-01-03 17:08 GMT

ಹೊಸದಿಲ್ಲಿ,ಜ.3: ಬಂಗಾಳಿ ಪತ್ರಿಕೆ ‘ ಇ ಸಮಯ್’ನ ಹಿರಿಯ ಸಂಪಾದಕ ಸುಮನ್ ಚಟ್ಟೋಪಾಧ್ಯಾಯ ಅವರನ್ನು ಸಿಬಿಐ ಹಣಕಾಸು ಅಕ್ರಮಗಳ ಆರೋಪದಲ್ಲಿ ಬಂಧಿಸಿರುವುದಕ್ಕೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಗುರುವಾರ ಕಳವಳ ವ್ಯಕ್ತಪಡಿಸಿದೆ. ಪ.ಬಂಗಾಳದ ಚಿಟ್‌ ಫಂಡ್ ಹಗರಣವೊಂದಕ್ಕೆ ಸಂಬಂಧಿಸಿದಂತೆ ಚಟ್ಟೋಪಾಧ್ಯಾಯ ಅವರನ್ನು ಡಿ.20ರಂದು ಸಿಬಿಐ ಬಂಧಿಸಿತ್ತು.

ಕಾನೂನಿಗಿಂತ ಯಾರೂ ಮೇಲಲ್ಲ ಮತ್ತು ಅದು ತನ್ನದೇ ದಾರಿಯಲ್ಲಿ ಸಾಗುತ್ತದೆ ಎನ್ನುವುದು ನಮ್ಮ ನಂಬಿಕೆಯಾಗಿದೆ. ಆದರೆ ಚಟ್ಟೋಪಾಧ್ಯಾಯ ಅವರು ತನ್ನ ಸಂಪಾದಕೀಯ ಕರ್ತವ್ಯಗಳನ್ನು ನಿರ್ವಹಿಸುವಾಗ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಅವರ ವಿರುದ್ಧ ತನಿಖೆಗೆ ಅಸ್ತ್ರವನ್ನಾಗಿಸಬಾರದು ಎಂದು ನಾವು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಹೇಳಿರುವ ಗಿಲ್ಡ್,ತನಿಖೆಯು ಸಂಪೂರ್ಣವಾಗಿ ನ್ಯಾಯಸಮ್ಮತವಾಗಿರಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News