ಇರಾ: ಇರುಮುಡಿ ಕಟ್ಟುತ್ತಿದ್ದ ಅಯ್ಯಪ್ಪ ವ್ರತಧಾರಿ ಕುಸಿದು ಬಿದ್ದು ಮೃತ್ಯು

Update: 2019-01-07 07:19 GMT

ಕೊಣಾಜೆ, ಜ. 7: ಅಯ್ಯಪ್ಪ ವ್ರತಧಾರಿಗಳಿಗೆ ಇರುಮುಡಿ ಕಟ್ಟುತ್ತಿದ್ದ ವೇಳೆ ಕುಸಿದು ಬಿದ್ದು ಅಯ್ಯಪ್ಪ ವ್ರತಧಾರಿಯೋರ್ವರು ಮೃತಪಟ್ಟ ಘಟನೆ ಸೋಮವಾರ ಇರಾ ಗ್ರಾಮದ ಮೂಳೂರು ನಲ್ಲಿ ನಡೆದಿದೆ.

ಸುರೇಶ್ ಗುರುಸ್ವಾಮಿ (55) ಮೃತರು ಎಂದು ಗುರುತಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ಶಬರಿಮಲೆಗೆ ಯಾತ್ರೆ ನಡೆಸುತ್ತಿದ್ದರು. ಅಲ್ಲದೆ ಗುರುಸ್ವಾಮಿಯಾಗಿ ಇತರ ಮಾಲಾಧಾರಿಗಳಿಗೆ ಮಾರ್ಗದರ್ಶಿಯಾಗಿದ್ದರು. ಅವರು ಮೂರು ವರ್ಷ ಪಾದಯಾತ್ರೆ ಮೂಲಕ ಶಬರಿಮಲೆ ಯಾತ್ರೆ ನಡೆಸಿದ್ದರು ಎಂದು ತಿಳಿದು ಬಂದಿದೆ.

ಸೋಮವಾರ ಶಬರಿಮಲೆ ಯಾತ್ರೆಗೆ ಹೊರಟ ಅಯ್ಯಪ್ಪ ವ್ರತಧಾರಿಗಳಿಗೆ ಸುರೇಶ್ ಅವರು ಇರುಮುಡಿ ಕಟ್ಟುತ್ತಿದ್ದಾಗ ಕುಸಿದು ಬಿದ್ದರು ಎನ್ನಲಾಗಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಹೃದಯಾಘಾತದಿಂದ ಅವರು‌ ಮೃತಪಟ್ಟ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News