ಬೆಳ್ಳಾರೆಯಲ್ಲಿ ಮಹಿಳಾ ನಮಾಝ್ ಭವನಕ್ಕೆ ಶಂಕುಸ್ಥಾಪನೆ

Update: 2019-01-07 10:27 GMT

ವಿಟ್ಲ, ಜ. 7: ಇಲ್ಲಿನ ಝಖರಿಯ್ಯಾ ಜುಮಾ ಮಸೀದಿ ಸಮೀಪ "ಮಹಿಳೆಯರ ನಮಾಝ್ ಭವನ" ನಿರ್ಮಾಣಕ್ಕೆ ಕುಂಬೋಳ್ ಸಯ್ಯದ್ ಕೆ.ಎಸ್. ಅಲಿ ತಂಙಳ್ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಸೀದಿ ಮುದರ್ರಿಸ್ ತಾಜುದ್ದೀನ್ ರಹ್ಮಾನಿ, ಮದ್ರಸಾ ಮಖ್ಯೊಪಾದ್ಯಾಯರಾದ ಮುಹಮ್ಮದ್ ಮುಸ್ಲಿಯಾರ್, ಅಧ್ಯಾಪಕರು ಗಳಾದ ಸುಲೈಮಾನ್ ಮುಸ್ಲಿಯಾರ್, ಝೈನುದ್ದೀನ್ ಮುಸ್ಲಿಯಾರ್, ಬೆಳ್ಳಾರೆ ಜಮಾಅತ್ ಅಧ್ಯಕ್ಷ ಕೆ.ಎಂ.ಮುಹಮ್ಮದ್ ಹಾಜಿ, ಉಪಾಧ್ಯಕ್ಷ ಯು.ಎಚ್.ಅಬೂಬಕ್ಕರ್, ಕೋಶಾಧಿಕಾರಿ ಹಾಜಿ.ಕೆ.ಮಮ್ಮಾಲಿ, ಕಾರ್ಯದರ್ಶಿ ಗಳಾದ ಕೆ.ಇಬ್ರಾಹಿಂ, ಬಶೀರ್ ಕಲ್ಲಪಣೆ, ಸದಸ್ಯರುಗಳಾದ ಅಬ್ದುಲ್ ಖಾದರ್ ಹಾಜಿ.ಬಿ, ಬಶೀರ್.ಬಿ.ಎ, ಆಶಿರ್.ಎ.ಬಿ,  ಯು.ಪಿ.ಬಶೀರ್, ಆರಿಫ್ ಬೆಳ್ಳಾರೆ, ಅಬ್ದುಲ್ ರಹ್ಮಾನ್ ತಂಬಿನಮಕ್ಕಿ, ಜಲೀಲ್.ಎ.ಆರ್, ಹಾಜಿ., ಖಲಂದರ್ ನವಾಝ್, ಬಶೀರ್.ಕೆ.ಎ,  ಜಮಾಅತ್ ಮುಖಂಡರುಗಳಾದ ನಝೀರ್.ಯು.ಎ, ಮಹ್ಮೂದ್.ಬಿ.ಎ, ಪುತ್ತುಂಞ ಹಾಜಿ, ಅಬ್ದುಲ್ಲಾ ಗೋವಾ, ಉಮರ್, ಇಬ್ರಾಹಿಂ.ಎಂ, ಆಲಿಕುಂಞ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News