ನಿರೂಪಕನಿಂದ ಪ್ರವಾದಿ ನಿಂದನೆ: ಅಡ್ಯಾರ್ ಪದವಿನಲ್ಲಿ ಪ್ರತಿಭಟನೆ
Update: 2019-01-09 18:58 GMT
ಮಂಗಳೂರು,ಜ.9: ಖಾಸಗಿ ಚಾನೆಲ್ ನಿರೂಪಕ ಅಜಿತ್ ಹನುಮಕ್ಕನವರ್ ಚರ್ಚೆಯ ವೇಳೆ ಪ್ರವಾದಿಯನ್ನು ನಿಂದಿಸಿದ್ದಾರೆಂದು ಆರೋಪಿಸಿ ಎಸ್ಸೆಸ್ಸೆಫ್ ಮತ್ತು ಎಸ್.ವೈ.ಎಸ್ ಜಂಟಿ ಆಶ್ರಯದಲ್ಲಿ ಅಡ್ಯಾರ್ ಪದವು ಮುಹಿಯುದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ ಪ್ರತಿಭಟನೆ ನಡೆಯಿತು.
ಮುಹಿಯುದ್ದೀನ್ ಜುಮಾ ಮಸೀದಿ ಇದರ ಪ್ರ.ಕಾರ್ಯದರ್ಶಿ ಹಾಗೂ ದಾರುಸ್ಸಲಾಂ ಮದ್ರಸ ಮುಖೋಪಾದ್ಯಾಯ ಸತ್ತಾರ್ ಸಖಾಫಿ ಮಾತಾಡಿ, ಪ್ರವಾದಿ ವಿರುದ್ಧ ಹೇಳಿಕೆ ನೀಡಿದ ನಿರೂಪಕನ ಮೇಲೆ ಕಾನೂನು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಂತಹ ಸಮಾಜವನ್ನು ಒಡೆಯುವ ನಿರೂಪಕರು ಇಲ್ಲದಾಗಬೇಕು ಎಂದು ಹೇಳಿದರು.
ಎಸ್.ವೈ.ಎಸ್ ಅಧ್ಯಕ್ಷ ಸಲೀಂ, ಊರ ಹಿರಿಯರು ಹಾಗೂ ದಾರುಸ್ಸಲಾಂ ಮದ್ರಸ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು ಎಂದು ಲುಕ್ಮಾನ್ ಅಡ್ಯಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.