ಈಶ್ವರನ್ ದ್ವಿಶತಕ ವ್ಯರ್ಥ: ಪಂಜಾಬ್ ಜಯಭೇರಿ

Update: 2019-01-10 18:21 GMT

ಕೋಲ್ಕತಾ,ಜ.10: ಆತಿಥೇಯ ಬಂಗಾಳ ತಂಡ ಹಾಗೂ ಪಂಜಾಬ್ ಮಧ್ಯೆ ರಣಜಿ ಟ್ರೋಫಿ ‘ಬಿ’ಗುಂಪಿನ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್ ದ್ವಿಶತಕ ವ್ಯರ್ಥವಾಯಿತು. ಈ ಫಲಿತಾಂಶದಿಂದಾಗಿ ಬಂಗಾಳ ನಾಕೌಟ್ ಹಂತಕ್ಕೇರುವ ಅವಕಾಶ ಕಳೆದುಕೊಂಡಿದೆ. ಸುಮಾರು 10 ಗಂಟೆಗಳ ಕಾಲ ಬ್ಯಾಟಿಂಗ್ ಮಾಡಿದ ಈಶ್ವರನ್ 373 ಎಸೆತಗಳಲ್ಲಿ 16 ಬೌಂಡರಿಗಳ ಸಹಿತ 201 ರನ್ ಗಳಿಸಿದರು. ಈಶ್ವರನ್ ಮ್ಯಾರಥಾನ್ ಬ್ಯಾಟಿಂಗ್ ಹಿನ್ನೆಲೆಯಲ್ಲಿ ಬಂಗಾಳ ಗೆಲ್ಲಲೇಬೇಕಾದ ಪಂದ್ಯದಲ್ಲಿ ತಡವಾಗಿ 6ಕ್ಕೆ 432ರನ್‌ಗೆ ಇನಿಂಗ್ಸ್ ಡಿಕ್ಲೇರ್ ಮಾಡಿತು. ಅಂತಿಮ ದಿನದಾಟ ಕೊನೆಯಾಗಲು 1 ಗಂಟೆ ಬಾಕಿ ಇರುವಾಗ ಪಂಜಾಬ್ ಗೆಲುವಿಗೆ ಬಂಗಾಳ 16 ಓವರ್‌ಗಳಲ್ಲಿ 173 ರನ್ ಗುರಿ ನೀಡಿತು. ಪಂಜಾಬ್ 15 ಓವರ್‌ಗಳಲ್ಲಿ 5 ವಿಕೆಟ್‌ಗೆ 132 ರನ್ ಗಳಿಸಿತು. ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮೂರಂಕವನ್ನು ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News